ಕೇವಲ 6 ದಿನಗಳ ಹಿಂದೆಯಷ್ಟೇ ಬದುಕಿನ ನವ ಜೀವನದ ಸಪ್ತಪದಿ ತುಳಿದಿತ್ತು ಆ ಜೋಡಿ. ವಿನಯ್ ನರ್ವಾಲ್ ಹಾಗೂ ಹಿಮಾಂಶಿ ದಾಂಪತ್ಯದ ಮೋಹನ ರಾಗದಲ್ಲಿ ತೇಲುತ್ತಿತ್ತು. ನೌಕಾಪಡೆಯಲ್ಲಿ ಲೆಫ್ಟಿನೆಂಟ್ ಆಗಿದ್ದ ನರ್ವಾಲ್ ಕೊಚ್ಚಿಯಲ್ಲಿ ಸೇವೆಯಲ್ಲಿದ್ದರು. ಏ. 16ರಂದು ಹಸೆಮಣೆ ಏರಿದ್ದ ಜೋಡಿ, ಹನಿಮೂನ್ ಗೆ ಅಂತಾ ಭಾರತದ ಮಿನಿ ಸ್ವಿಜರ್ ಲೆಂಡ್ ಪಹ್ಲಾಗಂಗೆ ಹೋಗಿತ್ತು. ಆದರೆ, ಕರಾಳ ವಿಧಿಯ ಅಟ್ಟಹಾಸ ಉಗ್ರರ ರೂಪದಲ್ಲಿ ಎದುರಾಗಿತ್ತು. ಪತ್ನಿಯ ಕಣ್ಣೆದುರೇ ಪತಿಯ ಹಣೆಗೆ ಗುಂಡಿಕ್ಕಿ ಬರ್ಬರವಾಗಿ ಹತ್ಯೆಗೈಯಲಾಗಿದೆ. ಈ ಘಟನೆ ಸಮಸ್ತ ಭಾರತೀಯರನ್ನ ಪ್ರತೀಕಾರದ ಚಿಲುಮೆಯಲ್ಲಿ ಕುದಿಯುವಂತೆ ಮಾಡಿತ್ತು. ಹಿಂದೂಸ್ಥಾನದ ಹೆಣ್ಣಿನ ಹಣೆಯ ಸಿಂಧೂರವನ್ನು ಅಳಿಸಿದ ನರರಾಕ್ಷಸರ ಸಂಹಾರ ಆಗಲೇ ಬೇಕು ಅಂತಾ ಒಕ್ಕೋರಲಿನಿಂದ ಧ್ವನಿ ಎತ್ತಿತ್ತು. 28 ಅಮಾಯಕರನ್ನು ಬಲಿ ಪಡೆದ ಜಿಹಾದಿಗಳ ರಣಬೇಟೆಯಾಡಲೇ ಬೇಕು ಎನ್ನುವ ಹಗೆ ಪ್ರತಿ ಭಾರತೀಯನ ಎದೆಯಲ್ಲಿ ಮಾರ್ದನಿಸುತ್ತಿದೆ.
ಪಾಕಿಸ್ಥಾನಕ್ಕೆ ಐದು ರಾಜತಾಂತ್ರಿಕ ಹೊಡೆತ
ಹಾಗೆ ನೋಡಿದ್ರೆ ಉಗ್ರರ ಸಂಹಾರಕ್ಕೆ ಪ್ರಧಾನಿ ಮೋದಿ ಮುನ್ನುಡಿ ಬರೆದಾಗಿದೆ. ಅದರ ಮೊದಲ ಅಧ್ಯಾಯವೆನ್ನುವಂತೆ ನಿನ್ನೆಯೇ ಪಾಕಿಸ್ಥಾನದೊಟ್ಟಿಗಿನ ಐದು ರಾಜತಾಂತ್ರಿಕ ಒಪ್ಪಂದಗಳಿಗೆ ತೆರೆ ಎಳೆಯಲಾಗಿದೆ. ಈ ಮೂಲಕ ಉಗ್ರವಾದಕ್ಕೆ ಹಾಲೆರೆಯುತ್ತಿರುವ ಪಾಪಿಸ್ಥಾನವನ್ನು ಬಗ್ಗು ಬಡೆಯುವ ಕಾರ್ಯ ಆರಂಭಿಸಲಾಗಿದೆ.
ಸಿಂಧು ನದಿ ಒಪ್ಪಂದಕ್ಕೆ ಭಾರತದಿಂದ ಬ್ರೇಕ್
ಅತಿ ದೊಡ್ಡ ದಿಟ್ಟ ನಿರ್ಧಾರ ಕೈಗೊಂಡಿರುವ ಭಾರತ ಪಾಕಿಸ್ಥಾನ ವಿರುದ್ಧ ಪ್ರಹಾರವನ್ನೇ ಮಾಡಿದೆ. ಅದರಲ್ಲೂ ಪಾಕಿಗಳ ಪಾಲಿನ ಜೀವನದಿಯಾಗಿರುವ ಸಿಂಧೂ ನದಿ ಜಲ ಒಪ್ಪಂದಕ್ಕೆ ಈಗ ಅಂತ್ಯ ಹಾಡಲಾಗಿದೆ. ಈ ಮೂಲಕ 1860ರಲ್ಲಿ ಏರ್ಪಟ್ಟಿದ್ದ ಒಪ್ಪಂದವನ್ನು ರದ್ದುಗೊಳಿಸಲಾಗಿದೆ. ಅಸಲಿಗೆ ಈ ಒಪ್ಪಂದ ಪಾಕಿಸ್ಥಾನಕ್ಕೆ ಅಳಿವು ಉಳಿವಿನದ್ದು. ಏಕೆಂದ್ರೆ ಪಾಕಿಸ್ಥಾನದ ಶೇಕಡಾ 80ರಷ್ಟು ಕೃಷಿ ಭೂಮಿಗೆ ಈ ನದಿ ನೀರೇ ಜೀವನಾಧಾರ. ಸಿಂಧೂ ಹಾಗೂ ಅದರ ಉಪನದಿಗಳಿಂದಲೇ ಕರಾಚಿ, ಲಾಹೋರ್, ಮುಲ್ತಾನ್ ನಂತಹ ಮಹಾನಗರಗಳ ದಾಹವೂ ತೀರುತ್ತಿದೆ. ವಿದ್ಯುತ್ ಉತ್ಪಾದನೆಗೂ ಈ ನೀರೇ ಶಕ್ತಿ. ಆದ್ರೀಗ ಭಾರತ ಈ ನದಿ ನೀರನ್ನ ಪರಿಪೂರ್ಣವಾಗಿ ಬಳಸಿಕೊಳ್ಳಲಿದೆ. ಅಷ್ಟೇ ಅಲ್ಲಾ ಯಾವಾಗ ಬೇಕಿದ್ರೂ ಸಂಗ್ರಹಿಸಬಹುದು. ಹೀಗಾಗಿ ಪಾಕಿಸ್ಥಾನಕ್ಕೆ ನೀರಿನ ಹರಿವೇ ಇಲ್ಲದಂತಾಗಿಲಿದೆ.
ಅಟ್ಟಾರಿ ಗಡಿ ಸಂಚಾರ ಸಂಪೂರ್ಣ ಸ್ತಬ್ಧ
ಇನ್ನು ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ಥಾನಕ್ಕೆ ಭಾರತ ಮತ್ತೊಂದು ದೊಡ್ಡ ಶಾಕ್ ನೀಡಿದೆ. ಅಟ್ಟಾರಿ ಗಡಿಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದ ಪಾಕಿಸ್ಥಾನಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಜನರ ಸಂಚಾರ ಮತ್ತು ಸರಕು ಸಾಗಾಟ ಸಂಪೂರ್ಣ ನಿಷೇಧಿಸಲಾಗಿದೆ. ಹೀಗಾಗಿ ವ್ಯಾವಹಾರಿಕವಾಗಿ ಭಾರತವನ್ನೇ ಅವಲಂಬಿಸಿರೋ ಪಾಕಿಸ್ಥಾನದ ಹಲವು ವ್ಯಾಪಾರಸ್ಥರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಅಷ್ಟೇ ಅಲ್ಲಾ ಈಗಾಗಲೇ ಭಾರತ ಪ್ರವೇಶಿಸಿರುವ ಜನರು ಮೇ 1ರೊಳಗೆ ದೇಶ ಬಿಟ್ಟು ತೊಲಗುವಂತೆ ತಾಕೀತು ಮಾಡಲಾಗಿದೆ.
ಪಾಕ್ ಪ್ರಜೆಗಳ ವೀಸಾಗಳನ್ನು ರದ್ದುಗೊಳಿಸಿದ ಭಾರತ
ಪಾಕಿಸ್ಥಾನಿ ಪ್ರಜೆಗಳಿಗೆ ನೀಡುವ ಭಾರತದ ವೀಸಾವನ್ನು ಈ ಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ಈಗಾಗಲೇ ಭಾರತದಲ್ಲಿರುವ ಎಲ್ಲ ಪಾಕಿಸ್ಥಾನಿ ನಾಗರೀಕರಿಗೆ ಎರಡು ದಿನದಲ್ಲಿ ದೇಶ ತೊರೆಯುವಂತೆ ಕಟ್ಟಪ್ಪಣೆ ಮಾಡಲಾಗಿದೆ. ಹೀಗಾಗಿ ಭಾರತದೊಂದಿಗೆ ಬಾಂಧವ್ಯ ಹೊಂದಿರುವ ಮತ್ತು ವ್ಯವಹಾರಿಕ ಉದ್ದೇಶಕ್ಕೆ ಭೇಟಿ ನೀಡೋ ಉದ್ಯಮಿಗಳಿಗೂ ದೊಡ್ಡ ಹೊಡೆತ ಬೀಳಲಿದೆ.
ಸಾರ್ಕ್ ವೀಸಾಗಳನ್ನು ರದ್ದು ಮಾಡಿದ ಹಿಂದೂಸ್ಥಾನ
ದಕ್ಷಿಣ ಏಷ್ಯಾ ಒಕ್ಕೂಟದ ಸದಸ್ಯ ರಾಷ್ಟ್ರಗಳಿಗೆ ನೀಡಲಾಗುವ ವಿಶೇಷ ಪ್ರಯಾಣ ಅನುಮತಿಯೇ ಸಾರ್ಕ್ ವಿನಾಯಿತಿ ವೀಸಾ. ಈ ವೀಸಾ ಹೊಂದಿರುವ ನಾಗರೀಕರು ಭಾರತದಲ್ಲಿ 1 ವರ್ಷ ವಾಸವಿರಲು ಅನುಮತಿ ನೀಡಲಾಗಿದೆ. ಸುಪ್ರೀಂ, ಹೈಕೋರ್ಟ್ ನ ಜಡ್ಜ್ ಗಳು, ಸರ್ಕಾರದ ಮುಖ್ಯಸ್ಥರು, ಅಧಿಕಾರಿಗಳು, ಕ್ರೀಡಾಪಟುಗಳು, ಪತ್ರಕರ್ತರು ಸೇರಿ 24 ಗುಂಪುಗಳ ಜನರಿಗೆ ಈ ವೀಸಾ ನೀಡಲಾಗುತ್ತಿತ್ತು. ಆದ್ರೀಗ ಈ ವೀಸಾವನ್ನು ಭಾರತ ರದ್ದುಗೊಳಿಸಿದೆ.
ರಾಜತಾಂತ್ರಿಕ ಸಿಬ್ಬಂದಿ ಸಂಖ್ಯೆ ಕಡಿತ
ಉಗ್ರರ ದಾಳಿ ಬೆನ್ನಲ್ಲೇ, ಭಾರತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ. ಇಸ್ಲಾಮಾಬಾದ್ ನ ಭಾರತದ ರಾಯಭಾರ ಕಚೇರಿ ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿದೆ. ಈ ಮೂಲಕ ನೆರೆ ರಾಷ್ಟ್ರದೊಂದಿಗಿನ ರಾಯಭಾರತ್ವ ರಾಜಕೀಯವನ್ನು ಬಂದ್ ಮಾಡುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗಿದೆ. 55 ಜನರಿದ್ದ ಸಿಬ್ಬಂದಿಯನ್ನೀಗ ಭಾರತ 30ಕ್ಕೆ ಇಳಿಸೋ ಮೂಲಕ ರಾಜತಾಂತ್ರಿಕ ವ್ಯವಹಾರವನ್ನು ಮೊಟಕುಗೊಳಿಸಿದೆ.