ಪಹಲ್ಗಾಮ್ ಹತ್ಯಾಕಾಂಡಕ್ಕೆ ಪ್ರತೀಕಾರ ಆರಂಭವಾಗಿದೆ. 26 ಪ್ರವಾಸಿಗರನ್ನು ಕೊಂದವರ ರಣಬೇಟೆ ಶುರುವಾಗಿದೆ. ಲಷ್ಕರ್ ಎ ತೋಬ್ಬಾದ ಕಮಾಂಡರ್ ಅಲ್ತಾಫ್ ಲಾಲಿಯನ್ನು ಸೇನಾಪಡೆಗಳು ಹೊಡೆದುರುಳಿಸಿವೆ. ಪಹಲ್ಗಾಮ್ ನರಮೇಧದ ಮಾಸ್ಟರ್ ಮೈಂಡ್ ಗಳಲ್ಲಿ ಒಬ್ಬನೆನಿಸಿಕೊಂಡ ಲಾಲಿ ಬಂಡೀಪೋರಾದಲ್ಲಿ ಅಡಗಿದ್ದ ಖಚಿತ ಮಾಹಿತಿ ಸೇನೆಗೆ ಲಭಿಸಿತ್ತು.
ಇದನ್ನಾಧರಿಸಿ ಆಪರೇಷನ್ ಆಕ್ರಮಣ್ ಗೆ ಮುನ್ನುಡಿ ಬರೆದಿದ್ದ ಭಾರತೀಯ ಸೇನೆ ಜಮ್ಮು-ಕಾಶ್ಮೀರ ಪೊಲೀಸರ ಸಹಯೋಗದಲ್ಲಿ ಲಾಲಿಯ ಖೇಲ್ ಖತಂ ಮಾಡಿದೆ. ಲಾಲಿಯನ್ನು ಬಂಧಿಸಲು ಮುಂದಾದ ಸೇನಾಪಡೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸಲಾಗಿದೆ. ಇದಕ್ಕುತ್ತರವಾಗಿ ಯೋಧರು ನಡೆಸಿದ ಫೈರಿಂಗ್ ನಲ್ಲಿ ಲಾಲಿ ಪ್ರಾಣಬಿಟ್ಟಿದ್ದಾನೆ. ಇನ್ನು ಆಪರೇಷನ್ ಆಕ್ರಮಣ್ ನ ಮೊದಲ ಬಲಿ ಅಲ್ತಾಫ್ ಲಾಲಿ ಆಗಿದ್ದು, ಮುಂದಿನ ನಂಬರ್ ಯಾರದ್ದು ಅನ್ನೋ ಲೆಕ್ಕ ಶುರುವಾಗಿದೆ.