ನವದೆಹಲಿ: ಕದನ ವಿರಾಮ ನಡೆದರೂ ಪಾಕಿಸ್ತಾನ ತನ್ನ ಉದ್ಧಟತನ ಮೆರೆಯುತ್ತಿದೆ. ಹೀಗಾಗಿ ಸೈನ್ಯಕ್ಕೆ ಸಂಪೂರ್ಣ ಅಧಿಕಾರ ನೀಡಲಾಗಿದೆ.
ಪಾಕ್ ಗಡಿಯಲ್ಲಿ ಉದ್ಧಟತನ ಮೆರೆದು ಕದನ ವಿರಾಮ (Ceasefire) ಉಲ್ಲಂಘಿಸಿದರೆ ಪ್ರತಿದಾಳಿ ನಡೆಸಿ ಎಂದು ಸೇನಾ ಕಮಾಂಡರ್ಗಳಿಗೆ ಭಾರತೀಯ ಸೇನೆ (Indian Army) ಪೂರ್ಣ ಅಧಿಕಾರ ನೀಡಿದೆ. ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಶನಿವಾರ ನಡೆದ ಒಪ್ಪಂದ ಉಲ್ಲಂಘಿಸಿದರೆ ಪ್ರತಿದಾಳಿ ನಡೆಸಲು ಪಶ್ಚಿಮ ಗಡಿಯಲ್ಲಿರುವ ಎಲ್ಲಾ ಸೇನಾ ಕಮಾಂಡರ್ಗಳಿಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅಧಿಕಾರ ನೀಡಿದ್ದಾರೆ.
ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಹೊಂದಿದ್ದ ಭಯೋತ್ಪಾದಕರು 26 ಜನ ಭಾರತೀಯ ಪ್ರವಾಸಿಗರ ಹತ್ಯೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಭಾರತ ಪ್ರತೀಕಾರ ತೀರಿಸಿಕೊಂಡಿತ್ತು. ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿತ್ತು. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಭಾರತ ದಾಳಿ ನಲೆಸಿತ್ತು. ಆನಂತರ ಪಾಕ್ ಕೂಡ ದಾಳಿ ನಡೆಸಿತ್ತು. ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡಿದೆ. ಈಗ ಕದನ ವಿರಾಮ ಘೋಷಣೆಯಾಗಿದ್ದರೂ ಪಾಕ್ ಉದ್ಧಟತನ ಮೆರೆಯುತ್ತಿದೆ. ಹೀಗಾಗಿ ಸೇನೆಗೆ ಎಲ್ಲ ಅಧಿಕಾರ ನೀಡಲಾಗಿದೆ.