ಹಾವೇರಿ: ತನ್ನ ಮಕ್ಕಳಿಬ್ಬರಿಗೆ ವಿಷವುಣಿಸಿದ ತಂದೆ ತಾನೂ ಆತ್ಮಹತ್ಯೆಗೆ (suicied)ಯತ್ನಿಸಿರುವ ಘಟನೆ ನಡೆದಿದೆ.
ಹಾವೇರಿ ತಾಲೂಕಿನ ಹಳೇರಿತ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ಹಳೇರಿತ್ತಿ ಎಂಬಲ್ಲಿ ಈ ಘಟನೆ ನಡೆದಿದೆ. ನಾಗೇಶ ಪವಾಡೆಪ್ಪರ(42)(Nagesh Pavadeppara) ಎಂಬಾತನೇ ಈ ಕೃತ್ಯ ಎಸಗಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳು ಹಾಗೂ ತಂದೆಗೆ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ (Kim’s Hospital) ದಾಖಲಿಸಲಾಗಿದೆ.
ನಾಗೇಶ್ ಬೇರೆ ಊರಿನಲ್ಲಿ ದುಡಿಯುತ್ತಿದ್ದ. ಹೆಂಡತಿ, ಮಕ್ಕಳನ್ನು ಊರಲ್ಲೇ ಬಿಟ್ಟಿರುತ್ತಿದ್ದ. ಆದರೆ, ಇತ್ತೀಚೆಗೆ ಊರಿಗೆ ಬಂದ ಹಣದ (money)ವಿಷಯಕ್ಕೆ ಪತ್ನಿ ಹಾಗೂ ಪತಿಯ ಮಧ್ಯೆ ಗಲಾಟೆ ನಡೆದಿದೆ. ಇದರಿಂದ ಕೋಪಗೊಂಡಿದ್ದ ನಾಗೇಶ್ 10 ವರ್ಷದ ಮಗ, 8 ವರ್ಷದ ಮಗಳನ್ನು ಊರಿನಿಂದ ಆಚೆಗೆ ಕರೆದುಕೊಂಡು ಹೋಗಿ ವಿಷವುಣಿಸಿ ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಸಂಬಂಧಿಕರು ಹೇಳಿದ್ದಾರೆ.
ಅಲ್ಲದೇ, ನಾಗೇಶ್ ಫೈನಾನ್ಸ್ ಗಳಲ್ಲೂ ಸಾಲ ಮಾಡಿಕೊಂಡಿದ್ದ. ಸಾಲ ಪಾವತಿಸುವಂತೆ ಫೈನಾನ್ಸ್ ನವರು ಕೂಡ ಒತ್ತಡ ಹೇರಿದ್ದರಿಂದಾಗಿ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಗುತ್ತಲ ಪೊಲೀಸ್ ಠಾಣೆ(police station) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.