ಕಾಂಗ್ರೆಸ್ ನಾಯಕರ ಮೇಲಿನ ಇಡಿ ದಾಳಿ ಪ್ರಕರಣ ಕ್ಷಣಕ್ಕೊಂದು ರಣರೋಚಕ ತಿರುವು ಪಡೆಯುತ್ತಿದೆ. ಕಳೆದ 11 ಗಂಟೆಗಳಿಂದ ನಿರಂತರವಾಗಿ ಶೋಧ ಕಾರ್ಯ ನಡೆದಿದ್ದು, ಮಹತ್ವದ ದಾಖಲೆಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಅಷ್ಟೇ ಅಲ್ಲಾ ಸಂಸದ ತುಕಾರಂ, ಶಾಸಕಿ ಅನ್ನಪೂರ್ಣ, ಶಾಸಕ ನಾರಾ ಭರತ್, ಕಂಪ್ಲಿ ಗಣೇಶ್ ರ ಮೊಬೈಲ್ ಗಳನ್ನು ಈಗ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಾಟ್ಸಾಪ್ ಮೂಲಕ ಕರೆ ಮಾಡಿ ಸಂಭಾಷಣೆ ನಡೆಸಿರುವ ವಿಚಾರ ತನಿಖೆಯಲ್ಲಿ ಬಯಲಾಗಿದ್ದು, ಈ ಮಾಹಿತಿಯನ್ನು ರಿಟ್ರೀವ್ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ವಾಲ್ಮೀಕಿ ನಿಗಮದ 21 ಕೋಟಿ ಹಣವನ್ನು ಬಳ್ಳಾರಿ ಲೋಕಸಭೆ ಚುನಾವಣೆಗೆ ಖರ್ಚು ಮಾಡಿರುವ ಆರೋಪ ಕೇಳಿ ಬಂದಿದ್ದು, ಇದೀಗ ತನಿಖೆ ಕಾಂಗ್ರೆಸ್ ಜನಪ್ರತಿನಿಧಿಗಳ ಬುಡಕ್ಕೆ ಬಂದಿದೆ. ವಾಟ್ಸಾಪ್ ಕಾಲ್, ಮೆಸೇಜ್ ರಿಟ್ರೀವ್ ಆದ್ರೆ ಕಾಂಗ್ರೆಸ್ ನ ಅತಿರಥರಿಗೆ ಕಂಟಕ ಎದುರಾಗೋ ಸಾಧ್ಯತೆಗಳಿವೆ.