ಬೆಂಗಳೂರು: ಇನ್ನೂರು ವರ್ಷಗಳ ಇತಿಹಾಸವಿರುವ ಆನೇಕಲ್ ಕರಗ ಗೊಂದಲದ ಮಧ್ಯೆಯೂ ಅದ್ದೂರಿಯಾಗಿ ನಡೆಯಿತು.
ಹೈಕೋರ್ಟ್ ಆದೇಶದ ಮೇರೆಗೆ ಕರಗ ಹೊತ್ತು ಅರ್ಚಕ ರಮೇಶ್ ಸಾಗಿದರು. ಆನೇಕಲ್ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕರಗ ಸಂಚರಿಸಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಕರಗ ವೀಕ್ಷಿಸಿ, ಪುನೀತರಾದರು. ಹೂವು ಸಮರ್ಪಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು.
ಪೊಲೀಸ್ ಬಿಗಿ ಭದ್ರತೆಯಲ್ಲಿ ಕರಗ ಮಹೋತ್ಸವ ನಡೆಯಿತು. ಆನೇಕಲ್ ಕರಗ ದೊಡ್ಡ ವಿವಾದವನ್ನು ಎದುರಿಸುತ್ತಿದೆ. ಅರ್ಚಕರು ಹಾಗೂ ಕುಲಸ್ಥರ ಮಧ್ಯೆ ದಶಕಗಳ ವಿವಾದವಿದೆ. ಈ ಬಾರಿಯೂ ಕರಗ ಹೊರುವುದಕ್ಕಾಗಿ ವಿವಾದ ತಲೆದೋರಿತ್ತು. ಆದರೆ, ಹೈಕೋರ್ಟ್ ಕರಗ ಮೂರು ದಿನ ಇದ್ದಾಗ ಆದೇಶ ನೀಡಿದೆ. ದೇವಾಲಯದ ಅರ್ಚಕ ರಮೇಶ್ ಕರಗ ಹೊರುವಂತೆ ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿ ದೇವಾಲಯದ ಅರ್ಚಕ ರಮೇಶ್ ಕರಗ ಹೊತ್ತು ಸಾಗಿದ್ದಾರೆ. ಮಳೆಯ ಮಧ್ಯೆಯೂ ರಮೇಶ್ ಕರಗ ಹೊತ್ತು ಸಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕರಗ ವೀಕ್ಷಿಸಿದ್ದಾರೆ