ಗದಗ: ಗಾಳಿ ಸಹಿತ ಮಳೆಗೆ ಮಾವು-ಪಪ್ಪಾಯ ಬೆಳೆ ಹಾನಿಯಾಗಿರುವ ಘಟನೆ ನಡೆದಿದೆ.

ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನಲ್ಲಿ ಕುಂಟೋಜಿ ಹಾಗೂ ಮ್ಯಾಕಲಝಲರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಂಟೋಜಿ ಗ್ರಾಮದ ರೈತ ಮಲ್ಲಿಕಾರ್ಜುನ ಗೋನಾಳ ಬೆಳೆದ ಪಪ್ಪಾಯಿ ಸಂಪೂರ್ಣ ಹಾನಿಯಾಗಿದೆ.
2 ಎಕರೆಯಲ್ಲಿ 1800 ಪಪ್ಪಾಯ ಗಿಡಗಳನ್ನು ರೈತ ಬೆಳೆದಿದ್ದರು. ಆದರೆ, ಅಕಾಲಿಕ ಗಾಳಿ ಸಹಿತ ಮಳೆಗೆ ಸಂಪೂರ್ಣ ಪಪ್ಪಾಯಿ ನೆಲಕಚ್ಚಿದೆ. ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಪಪ್ಪಾಯ ಬೆಳೆ ಹಾನಿ ಕಂಡು ರೈತ ಕಂಗಾಲಾಗಿದ್ದಾರೆ. ಮ್ಯಾಕಲಝರಿ ಗ್ರಾಮದ ವೀರಯ್ಯ ಕಾರಡಗಿಮಠ ಎಂಬ ರೈತ ಬೆಳೆದ ಮಾವು ಕೂಡ ನೆಲಕಚ್ಚಿದೆ.

ಕಟಾವು ಹಂತಕ್ಕೆ ಬಂದಿದ್ದ ಮಾವು ಸಂಪೂರ್ಣ ಹಾನಿಯಾಗಿದೆ. 8 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವು ಸಂಪೂರ್ಣವಾಗಿ ಹಾನಿಯಾಗಿದೆ. ಮಾರುಕಟ್ಟೆಗೆ ಮಾವು ಲಗ್ಗೆಯಿಡುತ್ತಿದೆ. ಬೆಳೆದ ಮಾವು ಇನ್ನೇನು ಕೈಗೆ ಸಿಗಬೇಕು ಎನ್ನುವಷ್ಟರಲ್ಲಿ ಮಾವು ಸಂಪೂರ್ಣವಾಗಿ ಹಾನಿಯಾಗಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರವು ಹಾನಿಯಾದ ತೋಟಗಾರಿಕೆ ಬೆಳೆಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.