ಅವರೆಲ್ಲಾ ಉತ್ತರ ಪ್ರದೇಶದ ಜೌನ್ ಪುರದವರು. 20 ಜನರಿದ್ದ ತಂಡ ಅವತ್ತು ಪಹಲ್ಗಾಮ್ ನ ಸೌಂದರ್ಯ ಸವಿಯಲು ಹೋಗಿದ್ರು…ಕುದುರೆ ಏರಿ ಸಾಗಿದ್ದ ಈ ಪ್ರವಾಸಿಗರ ತಂಡಕ್ಕೆ ಓರ್ವ ಅಪರಿಚಿತ ಬೆನ್ನು ಬಿದ್ದಿದ್ದ. ಪದೇ ಪದೆ ನೀವು ಎಷ್ಟು ಜನ ಬಂದಿದ್ದೀರಿ. ಯಾವ ಊರು? ನೀವೆಲ್ಲಾ ಯಾವ ಧರ್ಮವನ್ನು ಅನುಸರಿಸ್ತೀರಿ. ಖುರಾನ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಅಂತಾ ಹತ್ತಾರು ಸಾಲು ಸಾಲು ಪ್ರಶ್ನೆಗಳನ್ನ ಕೇಳುತ್ತಲೇ ಸಾಗಿದ್ದ.
ಆದರೆ, ಹೇಳಿ ಕೇಳಿ ಕಾಶ್ಮೀರ. ಆ ತಂಡದಲ್ಲಿದ್ದ ಪ್ರತಿಯೊಬ್ಬರಿಗೂ ಯಾರೋ ಧರ್ಮಾಂಧ ಇರಬೇಕು ಅಂತಾ ಮೂಗು ಮುರಿದಿದ್ರು. ಬಟ್…ಆ ತಂಡದಲ್ಲಿದ್ದ ಓರ್ವ ವೀರಾಗ್ರಣಿ ಮಾತ್ರ ಈ ಮನುಷ್ಯನ ಚಲನವಲನಗಳನ್ನು ಸೂಕ್ಷ್ಮವಾಗಿ ಗಮನಿಸಿದರು. ಅಲ್ಲೇನೋ ಸರಿಯಿಲ್ಲ ಅನ್ನುವುದನ್ನು ಗ್ರಹಿಸಿದ್ದಳು.ಅಷ್ಟೇ…ಆ ಕ್ಷಣಕ್ಕೆ ಆಕೆ ತೋರಿದ ಧೈರ್ಯ ಇವತ್ತು ಸಮಸ್ತ ಪುಲ್ಗಾಮ್ ದಾಳಿಯ ಹಿಂದಿನ ಕಟು ಸತ್ಯಕ್ಕೆ ದೊಡ್ಡ ಸಾಕ್ಷಿಯೊಂದನ್ನು ತೆರೆದಿಟ್ಟಿದೆ.
ಪ್ರವಾಸಿಗಳ ಮೊಬೈಲ್ ನಲ್ಲಿ ಸೆರೆಯಾಯ್ತು ಉಗ್ರನ ಫೋಟೋ
ನಿಜಕ್ಕೂ ಈ ಕೆಚ್ಚೆದೆಯ ಕಾರ್ಯಕ್ಕೆ ಎಂಟೆದೆ ಗುಂಡಿಗೆ ಬೇಕು…ಆ ತಾಕತ್ತನ್ನು ತೋರಿರೋ ಆ ಮಹಿಳೆ ಪಹಲ್ಗಾಮ್ ದಾಳಿಯ ಕಟುಕನ ಫೋಟೋವೊಂದನ್ನು ತನ್ನ ಮೊಬೈಲ್ ನಲ್ಲಿ ಕ್ಲಿಕ್ಕಿಸಿದ್ದಾಳೆ. ಈ ಮೂಲಕ ಲೇಡಿ ಜೇಮ್ಸ್ ಬಾಂಬ್ ಅಂತಲೇ ಕರೆಸಿಕೊಂಡಿದ್ದಾರೆ. ಅದು ಬೇರೆ ಯಾರೂ ಅಲ್ಲ. ಏಕ್ತಾ ತಿವಾರಿ. ಉತ್ತರ ಪ್ರದೇಶದ ಈ ಮಹಿಳೆಯ ಸಾಹಸಗಾಥೆಯೇ ಉಗ್ರರ ರಣಬೇಟೆಗೆ ಬಲುದೊಡ್ಡ ಸಾಕ್ಷ್ಯ ಒದಗಿಸಿದೆ. ಅವತ್ತು ನಿರಂತರ ಪ್ರಶ್ನಾವಳಿಗೆ ಮುಂದಾಗಿದ್ದವನ ಚಲವಲನಗಳೇ ಅನುಮಾನ ಮೂಡಿಸಿದ್ವು. ಹೀಗಾಗಿಯೇ ಏಕ್ತಾ ತನ್ನ ಮೊಬೈನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ಲು.
ಪಹಲ್ಗಾಮ್ ನಲ್ಲಿ ಫ್ಲಾಪ್ ಆಗಿತ್ತಾ ಉಗ್ರರ ಪ್ಲ್ಯಾನ್ ಎ
ಏಕ್ತಾ ತಿವಾರಿ ಅವತ್ತು ಗ್ರಹಿಸಿದ ದೊಡ್ಡ ಮಾಹಿತಿಯೊಂದು ಇವತ್ತು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಅವತ್ತು ಪ್ರವಾಸಿಗರ ಬೆನ್ನು ಬಿದ್ದು ಖುರಾನ್ ಪಠಿಸುವಂತೆ ಪೀಡಿಸಲು ಮುಂದಾಗಿದ್ದ ವ್ಯಕ್ತಿ ಜೊತೆಗಿದ್ದವರ ಮೊಬೈಲ್ ನಿರಂತರವಾಗಿ ರಿಂಗಣಿಸುತ್ತಲೇ ಇತ್ತು. ನಾನದನ್ನು ಗಮನಿಸಿದ್ದೆ. ಆ ವ್ಯಕ್ತಿ, ಪ್ಲ್ಯಾನ್ ಎ ಫ್ಲ್ಯಾಪ್ ಆಗಿದೆ. ಪ್ಲ್ಯಾನ್ ಬಿ ಕಾರ್ಯರೂಪಕ್ಕೆ ತನ್ನಿ ಎನ್ನುವಂತೆ ಸಂದೇಶ ನೀಡಿದ್ದನ್ನು ಏಕ್ತಾ ಗಮನಿಸಿದರು. ಅಷ್ಟೇ ಅಲ್ಲಾ ಪಹಲ್ಗಾಮ್ ನ ಆ ಕಾಡಿಗೆ 35 ಎಕೆ 47 ಬಂದೂಕು ರವಾನಿಸುವಂತೆಯೂ ಸೂಚಿಸಿದ್ದು ಏಕ್ತಾ ತಿವಾರಿ ಅರಿವಿಗೆ ಬಂದಿತ್ತು.
ಅಂದು ಏಕ್ತಾ ತಿವಾರಿ ಅನ್ನೋ ಗಟ್ಟಿಗಿತ್ತಿ ಹೆಣ್ಣು ಈ ಉಗ್ರನಿಗೆ ನಾವೆಲ್ಲ ಮುಸ್ಲಿಂಮರೇ ನಮ್ಮೊಟ್ಟಿಗೆ ಬಂದವರೂ ಮುಸ್ಲಿಂಮರೇ ಅಂತಾ ದಿಕ್ಕು ತಪ್ಪಿಸಿದ್ದರು. ಈ ಮೂಲಕ ತಮ್ಮೊಟ್ಟಿಗಿದ್ದ 20 ಜನರಲ್ಲದೆ ಅಕ್ಕ ಪಕ್ಕದವರ ಪ್ರಾಣವನ್ನೂ ಉಳಿಸಿದರು. ಅಷ್ಟೇ ಅಲ್ಲಾ ಈ ಕೀಚಕನ ಫೋಟೋವನ್ನೂ ಕ್ಲಿಕ್ ಮಾಡಿಕೊಂಡಿದ್ದರು. ಈ ಮೂಲಕ ಭಾರತದ ಅತ್ಯಂತ ಕರಾಳ ಅಧ್ಯಯದ ದೊಡ್ಡ ಪುರಾವೆಯೊಂದನ್ನು ದಾಖಲಿಸೋ ಮೂಲಕ ಏಕ್ತಾ ಚಾರಿತ್ರಿಕ ಫೋಟೋ ತೆಗೆದ ವೀರಾಗ್ರಣಿಯಾಗಿ ಹೊರ ಹೊಮ್ಮಿದ್ದಾರೆ. ಇಂಥಾ ಕೆಚ್ಚೆದೆಯ ಕಲಿಗೆ ಸಮಸ್ತ ಭಾರತೀಯರು ಸಲಾಂ ಹೇಳಲೇ ಬೇಕು.