ಯಾದಗಿರಿ: ಭೀಮಾನದಿ ಪ್ರವಾಹದಲ್ಲಿ ಯುವಕರು ಕೊಚ್ಚಿ ಹೋಗಿರುವ ಘಟನೆಗೆ ಸಂಬಂಧಿಸಿದಂತೆ ಯುವಕರ ಶವ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಅಗ್ನಿಶಾಮಕ, SDRF ತಂಡದಿಂದ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ವಡಗೇರಾ ತಾಲ್ಲೂಕಿನ ಮಾಚನೂರ ಗ್ರಾಮದ ಭೀಮಾನದಿಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಯುವಕರು ಭೀಮಾನದಿ ಪಾಲಾಗಿ 27 ಗಂಟೆ ಕಳೆದರೂ ಶವ ಪತ್ತೆಯಾಗಿದೆ. ಕಳೆದ 12 ಗಂಟೆಯಿಂದ ಯುವಕರ ಶವ ಪತ್ತೆಗಾಗಿ ನಿರಂತರ ಶೋಧ ಕಾರ್ಯ ನಡೆಯುತ್ತಿದೆ.
ಘಟನಾ ಸ್ಥಳಕ್ಕೆ ಸಿಪಿಐ ಸುನೀಲ್ ಮೂಲಿಮನಿ, ತಹಸೀಲ್ದಾರ್ ಮಂಗಳಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವೃದ್ಧ ಸಿದ್ದಪ್ಪಜ್ಜ ಸ್ಥಳದಲ್ಲಿ ಮೊಮ್ಮಗನ ನೆನೆದು ಗೋಗರೆಯುತ್ತಿದ್ದಾರೆ. ತಾಯಿ ಇಲ್ಲದ ಮಗನನ್ನು ಬೆಳೆಸಿ ಗಂಗೆಯ ಪಾಲು ಮಾಡಿದೇವು ಎಂದು ಕಣ್ಣೀರು ಸುರಿಸುತ್ತಿದ್ದಾರೆ. ಮದುವೆ ವಯಸ್ಸಿಗೆ ಬಂದಿದ್ದ ಮೊಮ್ಮಗ ಉಳಿಯಲಿಲ್ಲವಲ್ಲ ಎಂದು ಅಜ್ಜ ಗೋಳಾಡುತ್ತಿದ್ದಾರೆ.