ಇಂಥವರನ್ನು ಏನೆನ್ನಬೇಕೋ….ಈ ದೇಶದ ಮಣ್ಣಿನ ಅನ್ನ ತಿಂದು ಇದೇ ನೆಲದ ನೀರು ಕುಡಿದು..ನಮ್ಮ ನಡುವಿದ್ದು ನಮ್ಮ ಎದೆಗೇ ಚುಚ್ಚೋ ಪರಮ ನೀಚರಿವರು. ಶತ್ರುವನ್ನು ಬೇಕಿದ್ದರೆ ನಂಬು ಆದರೆ ಸ್ನೇಹದ ಮುಖವಾಡ ಧರಿಸಿದವರನ್ನು ನಂಬೆಬೇಡ ಅಂತಾ ಅದ್ಯಾವ ಪುಣ್ಯಾತ್ಮ ಹೇಳಿದ್ದನೋ ಗೊತ್ತಿಲ್ಲ. ಬಟ್….ಇಂಥವರನ್ನು ನೋಡಿದರೆ ಸಮಸ್ತ ಭರತವಾಸಿಗಳೇ ಇವತ್ತು ಛೀ…ಥೂ ಅಂತಾ ಉಗಿಯುತ್ತಿದ್ದಾರೆ. ತಮ್ಮವರನ್ನೆಲ್ಲಾ ಬಿಟ್ಟು ದೇಶಕ್ಕಾಗಿ ಹಗಲು ರಾತ್ರಿ ಗಡಿಯಲ್ಲಿ ದುಡಿಯೋ ಕಾಯಕ ಯೋಗಿ ಯೋಧರನ್ನೇ ಬಲಿಕೊಡುವುದಕ್ಕೆ ಹೊರಟ ಇಂತಹ ಹೀನ ಸಂತಾನಗಳನ್ನು ನಿಜಕ್ಕೂ ಕಂಡಲ್ಲಿ ಗುಂಡಿಕ್ಕಿ ಕೊಲ್ಲಬೇಕು. ಹೌದು ನಾವ್ ಹೇಳುತ್ತಿರುವುದು ಬೇರ್ಯಾರ ಬಗ್ಗೆಯೂ ಅಲ್ಲ…ಕ್ರೂರ ಸಂಜಾತೆ ಜ್ಯೋತಿ ಮಲ್ಹೋತ್ರಾ ಬಗ್ಗೆ.
ಜನ್ಮ ಕೊಟ್ಟ ನಾಡನ್ನೇ ಬಲಿಕೊಡಲು ಮುಂದಾದ ವಿಷಕನ್ಯೆ
ಹರಿಯಾಣದ ಹಿಸ್ಸಾರ್ ಮೂಲದ 33 ವರ್ಷದ ಜ್ಯೋತಿ ಮಲ್ಹೋತ್ರಾ ಇವತ್ತು ದೇಶದ್ರೋಹದ ಕೆಲಸ ಮಾಡಿ ಸೆರೆಸಿಕ್ಕಿದ್ದಾಳೆ. ನಿಜಕ್ಕೂ ಈ ರಾಕ್ಷಸ ಕನ್ಯೆ ಮಾಡಿದ್ದು ಮಾತ್ರ ಉಂಡ ಮನೆಗೇ ದ್ರೋಹ ಬಗೆಯುವ ಪರಮ ನೀಚ ಕೃತ್ಯ. ಅಸಲಿಗೆ ಈ ಜ್ಯೋತಿ ಮಲ್ಹೋತ್ರ ಟ್ರಾವಲ್ ವಿತ್ ಜೋ ಎನ್ನುವ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾಳೆ. ದೇಶ ವಿದೇಶ ಸುತ್ತುವುದು ಅವುಗಳ ವಿಡಿಯೋಗಳನ್ನು ಶೇರ್ ಮಾಡುವುದೇ ಈ ಕೀಚಕಿಯ ಕೆಲಸ. ಈ ನಿಟ್ಟಿನಲ್ಲೇ 2024ರಲ್ಲಿ ಒಡಿಶಾದ ಪುರಿಗೆ ಈ ಜ್ಯೋತಿ ಭೇಟಿ ನೀಡಿದ್ದಳು. ಅವತ್ತಲ್ಲಿ ಓರ್ವ ಮಹಿಳೆಯ ಪರಿಚಯವಾಗಿತ್ತು. ಆಕೆಯ ಗೆಳೆತನದಿಂದಲೇ ಜ್ಯೋತಿ ಇತ್ತೀಚೆಗೆ ವಾಘಾ ಗಡಿ ದಾಟಿ ಕರ್ತಾರ್ ಪುರ್ ಸಾಹೇಬ್ ಗೆ ಭೇಟಿ ನೀಡಿದ್ದಳು. ಅಷ್ಟೇ ಇಲ್ಲಿಂದಲೇ ಶುರುವಾಗಿದ್ದು ಈಕೆಯ ಹೀನಾತಿ ಹೀನ ಕೃತ್ಯ.
ವಾಘ ಗಡಿ, ಆಪರೇಷನ್ ಸಿಂಧೂರ ಮಾಹಿತಿ ಶೇರ್
ಕೃತಜ್ಞಹೀನ ಜಾತಕದ ಈ ಜ್ಯೋತಿ ಮಲ್ಹೋತ್ರಾ, ಹೀಗೆ ಕರ್ತಾರ್ ಸಾಹೇಬ್ ಗೆ ಹೋಗಿದ್ದಾಕೆಗೆ ಪಾಕಿಸ್ತಾನದ ಜಿಹಾದಿ ಕ್ರಿಮಿಗಳು ಬೀಸಿದ ಗಾಳಕ್ಕೆ ಸಿಲುಕಿದ್ಲು. ಪಾಕಿಸ್ತಾನದ ಐಎಸ್ಐ ಅಧಿಕಾರಿ ಅಲಿ ಹಸನ್ ಜೊತೆ ಸಂಪರ್ಕಕ್ಕೆ ಬಂದಿದ್ದ ಜ್ಯೋತಿ ನಿರಂತರವಾಗಿ ವಾಟ್ಸಾಪ್ ಚಾಟ್ ಮಾಡಿದ್ದಾಳೆ.
ಐಎಸ್ಐ ಹುಳು ಅಲಿ ಹನನ್ ಪಡೆದ ಮಾಹಿತಿ ಏನು
2023…ಜ್ಯೋತಿ ಮಲ್ಹೋತ್ರಾ, ಪಾಕಿಸ್ತಾನ ಪ್ರವಾಸಕ್ಕೆ ಹೋಗುವ ನಿರ್ಧಾರ ಮಾಡಿದ್ದಳು. ಹೀಗಾಗಿ ವೀಸಾ ಗಿಟ್ಟಿಸಲು ಪಾಕ್ ಹೈಕಮಿಷನ್ ಗೆ ತೆರಳಿದ್ದ ಜ್ಯೋತಿ ಅಲ್ಲಿ ಇಶಾನ್ ಉರ್ ರೆಹಮಾನ್ ಅಲಿಯಾಸ್ ದಾನಿಶ್ ಅನ್ನೋ ವ್ಯಕ್ತಿಯನ್ನ ಭೇಟಿ ಮಾಡಿದ್ಲು. ಇದಾದ ಬಳಕವೇ ಆಕೆ 2 ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದಾಳೆ. ಅಷ್ಟೇ ಅಲ್ಲಾ ಈ ಪ್ರವಾಸದಲ್ಲೇ ಭೇಟಿಯಾಗಿದ್ದ ಐಎಸ್ ಐ ಅಧಿಕಾರಿ ಅಲಿ ಹನಸ್. ಈ ಅಲಿ ಹಸನ್ ಜೊತೆ ಭಾರತಕ್ಕೆ ಮರಳಿದ ಮೇಲೂ ಜ್ಯೋತಿ ನಿರಂತರ ಸಂಪರ್ಕದಲ್ಲಿದ್ದಾಳೆ. ಅಷ್ಟೇ ಅಲ್ಲಾ ಇಬ್ಬರ ನಡುವೆ ವಾಟ್ಸಾಪ್ ಚಾಟ್ ಕೂಡಾ ನಡೆದಿದೆ. ಅವತ್ತು ಜ್ಯೋತಿಗೆ ಮೆಸೇಜ್ ಮಾಡಿದ್ದ ಅಲಿ ಹನನ್, ಅಟ್ಟಾರಿ ಗಡಿಯಿಂದ ಹೋಗುವಾಗ ನೀವು ಅಲ್ಲಿ ಸರ್ಕಾರಿ ಶಿಷ್ಠಾಚಾರಗಳನ್ನು ಪಾಲಿಸಿದೆಯಾ. ಇದಕ್ಕೆ ಪ್ರತಿಯಾಗಿ ಜ್ಯೋತಿ ಈ ಸಂದೇಶ ನನಗೆ ಅರ್ಥವಾಗಿಲ್ಲ ಅಂತಾ ಪ್ರತಿಕ್ರಿಯಿಸಿದ್ದಳು. ಮುಂದುವರಿದ ಹನಸ್, ಗಡಿಯಲ್ಲಿ ಯಾರಾದರೂ ಅಂಡರ್ ಕವರ್ ಏಜೆಂಟ್ ಗಳನ್ನು ಗುರುತಿಸಿದೆಯಾ ಎಂದಿದ್ದಾನೆ. ಅದಕ್ಕೆ ಜ್ಯೋತಿ ಅಂಥದ್ದೇನಿಲ್ಲ ಎಂದಿದ್ರು. ಹಾಗಂತಾ ಇದೆಲ್ಲವೂ ಕೋಡಿಂಗ್ ಭಾಷೆಯಲ್ಲಿ ನಡೆದಿರುವ ಸಂಭಾಷಣೆಯಾಗಿದೆ. ಇದರ ಅಸಲಿ ಕತೆಯನ್ನೀಗ ಖಾಕಿ ಶೋಧಿಸುತ್ತಿದೆ. ಒಟ್ಟಿನಲ್ಲಿ ನಮ್ಮವರೇ ನಮಗೆ ಶತ್ರುಗಳು ಎನ್ನುವಂತೆ ಇಂತಹ ದೇಶದ್ರೋಹಿಗಳಿಗೆ ತಕ್ಕ ಶಿಕ್ಷೆಯಾದಾಗಲೇ ಮತ್ತೊಬ್ಬರು ಈ ಕೃತ್ಯಕ್ಕೆ ಕೈ ಹಾಕಲು ಹಿಂದೇಟು ಹಾಕುತ್ತಾರೆ.