ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಿಂದಾಗಿ ದೇಶದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಮತ್ತೆ ಶಾಂತಿ ನೆಮ್ಮದಿ ನೆಲೆಸುವುದಕ್ಕಾಗಿ ಆದಿ ಶಂಕರಚಾರ್ಯ ಶಂಕರ ಜಯಂತಿ ಆಚರಿಸುವ ಮೂಲಕ ವಿಶೇಷ ಪೂಜೆಯನ್ನು ಮಾಡಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಈಗಾಗಲೇ ಮೈಸೂರು ಮತ್ತು ಬೆಂಗಳೂರಿನಿಂದ 13 ಜನರ ತಂಡದಿಂದ ವಿಶೇಷ ಪೂಜೆಯನ್ನು ನಡೆಸಲಾಗಿದ್ದು. ಡಾಕ್ಟರ್ ನಾಗಲಕ್ಷ್ಮಿ ನಾಗಾರ್ಜುನ್ ಮೈಸೂರು ತಂಡದಿಂದ ಆದಿ ಶಂಕರಚಾರ್ಯರ ಜೀವನನಾಧರಿತ ಭರತನಾಟ್ಯ ಪ್ರದರ್ಶನವನ್ನು ಮಾಡಲಾಗಿದೆ.
ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ಕೂಡ ಪ್ರಾರಂಭವಾಗುವ ಸಂಭವವಿದೆ. ನಮ್ಮ ಯೋಧರಿಗೆ ಹೆಚ್ಚು ಆರೋಗ್ಯ, ಶಕ್ತಿ ತುಂಬಲಿ ಜೊತೆಗೆ ದೇಶವನ್ನು ರಕ್ಷಣೆ ಮಾಡಿ, ಪಾಕಿಸ್ತಾನದ ವಿರುದ್ದ ನಮ್ಮ ಯೋಧರು ಗೆದ್ದು ಬರಲಿ ಎಂದು ರುದ್ರಾಭಿಷೇಕ, ಮೃತ್ಯುಂಜಯ ಜಪ ಮಾಡಲಾಯಿತು. ಜಿಲ್ಲಾಡಳಿತದಿಂದ ವಿಶೇಷ ಪೂಜೆ, ಹೋಮ -ಹವನಕ್ಕೆ ಅವಕಾಶ ಕಲ್ಪಿಸಲಾಗಿತ್ತು.