ಬೆಂಗಳೂರು: ನಗರದ ಗವಿಗಂಗಾಧರ ದೇವಾಲಯದಲ್ಲಿ ವಿಶೇಷ ದುರ್ಗಾ ಹೋಮ ನಡೆಯಿತು.
ಗವಿಗಂಗಾಧರ ದೇವಾಲಯದಲ್ಲಿ ಸೈನ್ಯದ ಬಲವರ್ಧನೆಗೆ ದುರ್ಗಾ ಹೋಮ ನಡೆಸಲಾಯಿತು. ನವರಾತ್ರಿ ಸಂದರ್ಭದಲ್ಲಿ ಈ ಹೋಮ ಮಾಡಲಾಗುತ್ತದೆ. ಅದೇ ಹೋಮವನ್ನು ಈಗ ಸೈನಿಕರಿಗಾಗಿ ನಡೆಸಲಾಗಿದೆ.
ನಾಡಿಗೆ ಹಾಗೂ ನಮ್ಮನ್ನು ರಕ್ಷಿಸುವ ಸೈನ್ಯಕ್ಕೆ ಬಲ ನೀಡು ತಾಯಿ ಎಂದು ದುರ್ಗಾ ಹೋಮ ನಡೆಸಲಾಗಿದೆ. ದುರ್ಗಾ ಹೋಮದ ಜೊತೆಗೆ ವಿಶೇಷ ಪೂಜೆಯನ್ನು ಕೂಡ ನಡೆಸಲಾಗಿದೆ. ಶತ್ರುಗಳ ಸಂಹಾರದ ಜೊತೆಗೆ ಸೈನಿಕರ ಶಕ್ತಿಗಾಗಿ ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡಲಾಯಿತು.