ಶಿವಮೊಗ್ಗ: ಜಿಲ್ಲೆಯ ಬೊಮ್ಮನಕಟ್ಟೆ ಪ್ರದೇಶದಲ್ಲಿ ಯುವಕನ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದ ದುಷ್ಕರ್ಮಿಗಳು ಯುವಕನ ಕೊಲೆ ಮಾಡಿದ್ದರು. ಬೊಮ್ಮನಕಟ್ಟೆ ಕೆರೆ ಏರಿ ಮೇಲೆ ನಿನ್ನೆ ರಾತ್ರಿ ಈ ಘಟನೆ ನಡೆದಿತ್ತು. ಅವಿನಾಶ್(32)ಕೊಲೆಯಾಗಿದ್ದ. 10 ವರ್ಷಗಳ ಹಿಂದೆ ನಡೆದಿದ್ದ ತಮಿಳ್ ಕುಮಾರನ ಕೊಲೆ ಪ್ರಕರಣದಲ್ಲಿ ಅವಿನಾಶ್ ಭಾಗಿಯಾಗಿದ್ದ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆ ಗುರಿಯಾಗಿ 5 ವರ್ಷ ಜೈಲು ಶಿಕ್ಷೆ ಅನುಭವಿಸಿ ಅವಿನಾಶ್ ಹೊರ ಬಂದಿದ್ದ. ನಿನ್ನೆ ರಾತ್ರಿ 9 ಗಂಟೆ ಸುಮಾರಿಗೆ ಊಟ ಮುಗಿಸಿಕೊಂಡು ಮನೆಯಿಂದ ಹೊರ ಹೋಗಿದ್ದ ವೇಳೆ ದುಷ್ಕರ್ಮಿಗಳು ಅವಿನಾಶ್ ನನ್ನು ಕೊಲೆ ಮಾಡಿದ್ದಾರೆ.