ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಇದೀಗ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯೋರ್ವ ಕನ್ನಡ ಹಾಡು ಹಾಡುವಂತೆ ಒತ್ತಾಯಿಸಿದ್ದಾನೆ. ಈ ವೇಳೆ ಪ್ರತಿಕ್ರಿಯಿಸಿದ ಸೋನು ನಿಗಮ್ ನಿಮ್ಮ ಇಂಥಾ ಧೋರಣೆಯಿಂದಲೇ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಾಗುವಂತೆ ಮಾಡಿದೆ ಎಂದಿದ್ದಾರೆ.
ಈ ಮಾತಿನ ವಿರುದ್ಧವೀಗ ಕನ್ನಡಪರ ಸಂಘಟನೆಗಳು ಗರಂ ಆಗಿದ್ದು, ಸೋನು ನಿಗಮ್ ಗೆ ಇನ್ಮುಂದೆ ಕನ್ನಡ ಹಾಡುಗಳನ್ನು ಹಾಡದಂತೆ ನಿರ್ಬಂಧ ಹೇರುವಂತೆ ಆಗ್ರಹಿಸಿವೆ. ಕನ್ನಡದ ಹಾಡು ಹಾಡುವಂತೆ ಕೋರಿದ್ದು ಹೇಗೆ ಭಯೋತ್ಪಾದನೆಯಾಗುತ್ತೆ ಅಂತಾ ಪ್ರಶ್ನಿಸಿರುವ ಕರವೇ ಅಧ್ಯಕ್ಷ ನಾರಾಯಣಗೌಡ, ಗಾಯಕನ ವಿರುದ್ಧ ಪ್ರಕರಣ ದಾಖಲಿಸವಂತೆಯೂ ಆಗ್ರಹಿಸಿದ್ದಾರೆ.