ಸಿಎಂ ಸಿದ್ದರಾಮಯ್ಯ ಅಧಿಕಾರದಿಂದ ಹೋಗುವುದರೊಳಗೆ ರಾಜ್ಯವನ್ನು ಸಾಬರಿಗೆ ಮಾರಲು ಹೊರಟಿದ್ದಾರೆ ಎಂದು ಮಾಜಿ ಡಿಸಿಎಂ ಕೆ ಎಸ್ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಮುಸ್ಲಿಂರ ಅಭಿವೃದ್ಧಿಗೆ ಮೀಸಲಿಟ್ಟ ಹಣ ಹೆಚ್ಚಾಗಿದೆ. ಈಗ ಸಿದ್ದರಾಮಯ್ಯ ಶಾದಿಗೆ, ಮಸೀದಿಗೆ, ಮುಲ್ಲಾಗಳಿಗೆ ಈ ಹಿಂದೆ ಕೊಟ್ಟಿದ್ದಕ್ಕಿಂತ ಮೂರುಪಟ್ಟು ಹೆಚ್ಚು ನೀಡುತ್ತಿದ್ದಾರೆ. ಇದೀಗ ವಸತಿ ಕ್ಷೇತ್ರದಲ್ಲೂ ಮೀಸಲು ನೀಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಬಜೆಟ್ ನಲ್ಲಿ ಸಾಕಷ್ಟು ಹಣ ನೀಡಿ ಮತ್ತೆ ಮೀಸಲು ನೀಡಲು ಹೊರಟಿದ್ದಾರೆ. ಇದು ಸರ್ಕಾರದ ಪತನದ ಸಂಕೇತವಾಗಿದೆ. ಇದರ ಬದಲು ಕಾಂಗ್ರೆಸ್ ನವರು ಮುಸ್ಲಿಮರ ವೋಟ್ ಇಲ್ಲದೆ ನಾವು ಬದುಕುವುದಿಲ್ಲ ಎಂದು ಹೇಳಿಬಿಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರು ಈ ತೀರ್ಮಾನಕ್ಕೆ ಒಪ್ಪಿಗೆ ನೀಡಬಾರದು. ರಾಜ್ಯ ಸರ್ಕಾರದ ವಿರುದ್ಧ ವೇದಿಕೆ ಮತ್ತು ಬ್ರಿಗೇಡ್ ವತಿಯಿಂದ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುತ್ತದೆ ಜೊತೆಗೆ ಸರ್ಕಾರದ ನೀತಿ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ತಿಳಿಸಿದರು.