ನವದೆಹಲಿ: ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ತಲುಪಿದ ಮೊದಲ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubanshu Shukla) ತಮ್ಮ ಮೊದಲ ಸಂದೇಶ ನೀಡಿದ್ದಾರೆ.
ಬಾಹ್ಯಾಕಾಶ ತಲುಪಿದ ಗಗನಯಾತ್ರಿ ಶುಭಾಂಶು ಶುಕ್ಲಾ ಮೊದಲ ಸಂದೇಶ ನೀಡಿದ್ದಾರೆ. “ಈ ಪ್ರಯಾಣ ಅದ್ಭುತವಾಗಿತ್ತು. 14 ದಿನಗಳು ಅದ್ಭುತವಾಗಿರುತ್ತವೆ ಎಂದು ನನಗೆ ತುಂಬಾ ವಿಶ್ವಾಸವಿದೆ. ವಿಜ್ಞಾನ ಮತ್ತು ಸಂಶೋಧನೆಯನ್ನು ಮುಂದುವರೆಸುವುದು ಮತ್ತು ಒಟ್ಟಿಗೆ ಕೆಲಸ ಮಾಡುವುದು ಬಹಳ ಸಂತಸದ ಮತ್ತು ಹೆಮ್ಮೆಯ ಸಂಗತಿ. ಭಾರತೀಯರಿಗೆಲ್ಲ ಧನ್ಯವಾದಗಳು ಎಂದಿದ್ದಾರೆ.
“ನನ್ನ ಪ್ರೀತಿಯ ದೇಶವಾಸಿಗಳಿಗೆ ಒಂದು ಸಣ್ಣ ಸಂದೇಶ. ನಿಮ್ಮ ಪ್ರೀತಿ ಮತ್ತು ಆಶೀರ್ವಾದದಿಂದ ನಾನು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಸುರಕ್ಷಿತದಿಂದ ಮುಟ್ಟಿದ್ದೇನೆ. ಸುಲಭ ಅನಿಸಿದರೂ ಸ್ವಲ್ಪ ಕಷ್ಟ. ತಲೆ ಸ್ವಲ್ಪ ಭಾರವಾಗಿದೆ, ಇದು ಕಿರಿಕಿರಿಯಾದರೂ ಇವೆಲ್ಲವೂ ತುಂಬಾ ಸಣ್ಣ ವಿಷಯ. ನಾವು ಕೆಲವೇ ದಿನಗಳಲ್ಲಿ ಇದಕ್ಕೆ ಒಗ್ಗಿಕೊಳ್ಳುತ್ತೇವೆ. ಇದೆಲ್ಲ ಪ್ರಯಾಣದ ಹೆಜ್ಜೆ. ನಾನು ಮುಂದಿನ 14 ದಿನಗಳವರೆಗೆ ಇಲ್ಲಿ ವಾಸಿಸಬೇಕು ಮತ್ತು ಬಹಳಷ್ಟು ವಿಜ್ಞಾನ ಪ್ರಯೋಗಗಳನ್ನು ನಡೆಸಬೇಕು. ನಿಮ್ಮೆಲ್ಲರೊಂದಿಗೆ ಮಾತನಾಡಬೇಕು. ಈ ಹಂತವು ನಮ್ಮದೇ ಆದ ಬಾಹ್ಯಾಕಾಶ ಪ್ರಯಾಣದಲ್ಲಿ ಒಂದು ಮಹತ್ವದ ಹೆಜ್ಜೆಯಾಗಲಿದೆ ನನ್ನ ಭುಜದ ಮೇಲಿನ ತ್ರಿವರ್ಣ ಧ್ವಜವು ನೀವೆಲ್ಲರೂ ನನ್ನೊಂದಿಗಿದ್ದೀರಿ ಎಂದು ನನಗೆ ನೆನಪಿಸುತ್ತದೆ. ಮುಂದಿನ 14 ದಿನಗಳು ರೋಮಾಂಚನಕಾರಿಯಾಗಿರುತ್ತವೆ ಎಂದು ನಾನು ಭಾವಿಸುತ್ತೇನೆ. ಧನ್ಯವಾದಗಳು. ಜೈ ಹಿಂದ್, ಜೈ ಭಾರತ್ ” ಎಂದು ಹಿಂದಿಯಲ್ಲಿ ಮಾತನಾಡಿದ್ದಾರೆ. ಶುಭಾಂಶು ಶುಕ್ಲಾ ಅವರು ಭಾರತೀಯ ವಾಯುಪಡೆಯಲ್ಲಿ ಪರೀಕ್ಷಾ ಪೈಲಟ್ ಆಗಿದ್ದಾರೆ.