• ಬೆಂಗಳೂರಿಗೆ ಶ್ರೀರಾಮ್ ವೆಲ್ತ್ ಪ್ರವೇಶ – ಭಾರತದ ನವಯುಗದ ಸಂಪತ್ತು ಸೃಷ್ಟಿಕರ್ತರ ಕೇಂದ್ರವಾಗಿ ವೇಗವಾಗಿ ಹೊರಹೊಮ್ಮುತ್ತಿರುವ ನಗರ
• ಸನ್ಲಾಮ್ ಗ್ರೂಪ್ ಜತೆಗಿನ 50:50 ಜಂಟಿ ಉದ್ಯಮದಿಂದ ಭಾರತದಾದ್ಯಂತ ಸಂಪತ್ತು ನಿರ್ವಹಣೆಯನ್ನು ಪ್ರಜಾಪ್ರಭುತ್ವಗೊಳಿಸುವ ಗುರಿ
• ಮುಂದಿನ ಐದು ವರ್ಷಗಳಲ್ಲಿ ₹50,000 ಕೋಟಿ ಆಸ್ತಿ ಸಲಹೆ (AUA) ಮತ್ತು 500 ಸಂಪತ್ತು ವೃತ್ತಿಪರರನ್ನು ಗುರಿಯಾಗಿರಿಸಿಕೊಂಡಿದೆ.
ಬೆಂಗಳೂರು, ಜೂನ್ 16, 2025 –ಬೆಂಗಳೂರಿಗೆ ಸಿಹಿ ಸುದ್ದಿ. ದಕ್ಷಿಣ ಆಫ್ರಿಕಾದ ಸನ್ಲಾಮ್ ಗ್ರೂಪ್ನ ಸಹಭಾಗಿತ್ವದಲ್ಲಿ ಶ್ರೀರಾಮ್ ಗ್ರೂಪ್ನ ಹೊಸದಾಗಿ ಪ್ರಾರಂಭಿಸಲಾದ ಸಂಪತ್ತು ನಿರ್ವಹಣಾ ವಿಭಾಗ ಶ್ರೀರಾಮ್ ವೆಲ್ತ್ಈಗ ಬೆಂಗಳೂರಿನಲ್ಲಿ ತನ್ನ ವ್ಯವಹಾರವನ್ನು ವಿಸ್ತರಿಸಲಿದೆ.
ಉದ್ಯಮಶೀಲತಾ ಶಕ್ತಿ ಮತ್ತು ತಂತ್ರಜ್ಞಾನ-ಚಾಲಿತ ಮನಸ್ಥಿತಿಗೆ ಹೆಸರುವಾಸಿಯಾದ ಬೆಂಗಳೂರು, ಶ್ರೀರಾಮ್ ವೆಲ್ತ್ನ ಮುಂದಿನ ಅಧ್ಯಾಯಕ್ಕೆ ನೈಸರ್ಗಿಕ ಆಯ್ಕೆಯಾಗಿದೆ. ಮೊದಲನೇ ತಲೆಮಾರಿನ HNIಗಳು ಮತ್ತು ಜಾಗತಿಕವಾಗಿ ಗಮನ ಹರಿಸಿದ ವೃತ್ತಿಪರರ ಬೆಳೆಯುತ್ತಿರುವ ವಿಭಾಗಕ್ಕೆ ಬೆಂಗಳೂರು ನೆಲೆಯಾಗಿದೆ.
50:50 ಪ್ರಮಾಣದ ಜಂಟಿ ಉದ್ಯಮವು ಶ್ರೀರಾಮ್ ಮತ್ತು ಸನ್ಲಾಮ್ ನಡುವಿನ 150 ವರ್ಷಗಳ ಸಾಮೂಹಿಕ ಅನುಭವಕ್ಕೆ ಬಲ ನೀಡುತ್ತದೆ. ಅತ್ಯಾಧುನಿಕ ರೀತಿಯ ಸಂಪತ್ತು ಕುರಿತಾದ ಪರಿಹಾರಗಳನ್ನು ಭಾರತ ದಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶಿಸುವಂತೆ ಮಾಡುವ ಹಂಚಿಕೆಯ ದೃಷ್ಟಿಕೋನವನ್ನು ಹೊಂದಿದೆ. ಕಂಪನಿಯು ₹50,000 ಕೋಟಿ ಆಸ್ತಿ ಸಲಹೆ (AUA) ಗುರಿಯನ್ನು ಹೊಂದಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ 500 ಸಂಪತ್ತು ವೃತ್ತಿಪರರನ್ನು ಸೇರಿಸಿಕೊಳ್ಳಲು ಯೋಜಿಸಿದೆ.
ಭಾರತದ ಬೆಳೆಯುತ್ತಿರುವ ಶ್ರೀಮಂತ ಮತ್ತು ಹೆಚ್ಚಿನ ನಿವ್ವಳ ಮೌಲ್ಯದ ಹೂಡಿಕೆದಾರರ ನೆಲೆಗೆ ಸೇವೆ ಸಲ್ಲಿಸುವ ಗುರಿಯನ್ನು ಶ್ರೀರಾಮ್ ವೆಲ್ತ್ ಹೊಂದಿದೆ. ಇದು ವ್ಯವಹಾರಗಳಿಗಿಂತ ಸಂಬಂಧಗಳಿಗೆ ಆದ್ಯತೆ ನೀಡುವ ವೈಯಕ್ತಿಕ ಎನಿಸಿದ ಪರಿಹಾರಗಳನ್ನು ಒದಗಿಸುತ್ತದೆ. ಕಂಪನಿಗೆ ಸಂಪತ್ತು ನಿರ್ವಹಣೆ, ಸಾಲ ಪರಿಹಾರಗಳು, ರಕ್ಷಣಾ ಪರಿಹಾರಗಳು, ಜಾಗತಿಕ ಹೂಡಿಕೆ ಅವಕಾಶಗಳು ಮತ್ತು ಆನುವಂಶಿಕ ಮತ್ತು ಪರಂಪರೆ ಯೋಜನೆಯನ್ನು ನೀಡುತ್ತದೆ – ತಂತ್ರಜ್ಞಾನ-ನೇತೃತ್ವದ ನಾವೀನ್ಯತೆಗಳು ಮತ್ತು ಸನ್ಲಾಮ್ನ ಜಾಗತಿಕ ಹೂಡಿಕೆ ಪರಿಣತಿ ಮುಂತಾದವು ಬೆನ್ನೆಲುಬಾಗಿವೆ.
ಶ್ರೀರಾಮ್ ವೆಲ್ತ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವಿಕಾಸ್ ಸತಿಜಾ ಮಾತನಾಡಿ, “ವೈಯಕ್ತಿಕ ಎಂದೆನಿಸುವ ಸಲಹೆಯನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮೂಲಕ ಸಂಪತ್ತು ಸೃಷ್ಟಿಯಲ್ಲಿ ವಿಶ್ವಾಸಾರ್ಹ ಪಾಲುದಾರರಾಗುವುದು ನಮ್ಮ ದೃಷ್ಟಿಕೋನವಾಗಿದೆ” ಎಂದು ಹೇಳಿದರು. “ಆಧುನಿಕ ಹೂಡಿಕೆದಾರರ ನೆಲೆ ಹೊಂದಿರುವ ಬೆಂಗಳೂರು, ಈ ಭರವಸೆಯನ್ನು ಮುಂದಕ್ಕೆ ಕೊಂಡೊ ಯ್ಯಲು ನೈಸರ್ಗಿಕ ಮುಂದಿನ ಗಡಿಯಾಗಿದೆ. ಸನ್ಲಾಮ್ನ ಜಾಗತಿಕ ಪರಿಣತಿಯ ಸಹಯೋಗ ದೊಂದಿಗೆ, ಪಾರದರ್ಶಕ ಮತ್ತು ಶಾಶ್ವತ ಸಂಪತ್ತು ನೀಡುವ ವೇದಿಕೆ ನಿರ್ಮಿಸಲು ನಾವು ಬದ್ಧರಾಗಿದ್ದೇವೆ.”
ಸಂಸ್ಥೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಗಳಲ್ಲಿ ಕರ್ನಾಟಕವು ಒಂದಾಗುವ ನಿರೀಕ್ಷೆ ಯಿದೆ. ಬೆಂಗಳೂರನ್ನು ತನ್ನ ನೆಲೆಯಾಗಿಟ್ಟುಕೊಂಡು, ಶ್ರೀರಾಮ್ ವೆಲ್ತ್ ರಾಜ್ಯಾದ್ಯಂತ ತನ್ನ ಅಸ್ತಿತ್ವ ಬಲಪಡಿಸಲು ದಾಪುಗಾಲು ಹಾಕುತ್ತಿದೆ.
ಶ್ರೀರಾಮ್ ಕ್ಯಾಪಿಟಲ್ನ ಎಂಡಿ ಮತ್ತು ಸಿಇಒ ಸುಭಾಶ್ರೀ ಶ್ರೀರಾಮ್ ಮಾತನಾಡಿ, “ಶ್ರೀರಾಮ್ ವೆಲ್ತ್ ಶ್ರೀರಾಮ್ ಗ್ರೂಪ್ನ ಬೆಳವಣಿಗೆಯ ಮುಂದಿನ ಅಧ್ಯಾಯ ಎಂದು ಹೇಳಲಾಗುತ್ತಿದೆ. ಇದು ಜಂಟಿ ಉದ್ಯಮ ಕ್ಕಿಂತ ಹೆಚ್ಚಿನದಾಗಿದೆ. ಲಕ್ಷಾಂತರ ಭಾರತೀಯರಿಗೆ ತಮ್ಮ ಆರ್ಥಿಕ ಸಮೃದ್ಧಿಯನ್ನು ಇನ್ನಷ್ಟು ವೃದ್ದಿಸಿ ಕೊಳ್ಳುವಂತೆ ಮಾಡುವುದೇ ಕಂಪನಿಯ ಧ್ಯೇಯವಾಗಿದೆ” ಎಂದು ಹೇಳಿದರು.
ಈ ಉದ್ಯಮವು ಭಾರತದ ಅಗ್ರ 10 ನಗರಗಳಲ್ಲಿ ಕಾರ್ಯಾಚರಣೆ ಪ್ರಾರಂಭಿಸುತ್ತದೆ. ಮುಂದಿನ ವರ್ಷದಲ್ಲಿ 20 ನಗರಗಳಿಗೆ ವಿಸ್ತರಿಸುತ್ತದೆ. ಶ್ರೀರಾಮ್ ಗ್ರೂಪ್ ದೀರ್ಘಕಾಲದ ಬ್ರ್ಯಾಂಡ್ ಇಕ್ವಿಟಿ ಹೊಂದಿರುವ ಪ್ರದೇಶಗಳಾದ ಟೈಯರ್ 2 ಮತ್ತು ಟೈಯರ್ 3 ಮಾರುಕಟ್ಟೆಗಳ ಮೇಲೆ ಬಲವಾದ ಗಮನವನ್ನು ಕೇಂದ್ರೀ ಕರಿಸುತ್ತದೆ. 2047 ರ ವೇಳೆಗೆ ಭಾರತದ $3.5 ಟ್ರಿಲಿಯನ್ ಆರ್ಥಿಕತೆ ಮತ್ತು ಅಂದಾಜು $10 ಟ್ರಿಲಿಯನ್ ಸಂಘಟಿತ ಸಂಪತ್ತು ನಿರ್ವಹಣಾ ಮಾರುಕಟ್ಟೆಯಾಗುವ ದೃಷ್ಟಿಕೋನಕ್ಕೆ ಅನುಗುಣವಾಗಿ, ಶ್ರೀರಾಮ್ ವೆಲ್ತ್, ಪ್ರವೇಶಿಸಬಹುದಾದ AI-ಸಕ್ರಿಯಗೊಳಿಸಿದ ಸೇವೆಗಳು ಸೇರಿದಂತೆ ಬಹು ವಿಧಾನಗಳ ಮೂಲಕ ಸಂಪತ್ತನ್ನು ಪ್ರಜಾಪ್ರಭುತ್ವಗೊಳಿಸಲು ಸಜ್ಜಾಗಿದೆ.
“ಭಾರತದ ಆರ್ಥಿಕತೆ ಬೆಳೆದಂತೆ ಮತ್ತು ಜನರು ಶ್ರೀಮಂತರಾಗುತ್ತಿದ್ದಂತೆ ನಾವು ಸಂಪತ್ತು ನಿರ್ವಹಣೆ ಯನ್ನು ನೈಸರ್ಗಿಕ ವಿಕಾಸವೆಂದು ಪರಿಗಣಿಸುತ್ತೇವೆ. ನಮ್ಮ ಗುರಿ ಕೇವಲ ಹಣವನ್ನು ನಿರ್ವಹಿಸುವು ದಕ್ಕೆ ಸೀಮಿತವಾಗಿಲ್ಲ, ಬದಲಾಗಿ ಅರ್ಥಪೂರ್ಣ ಪರಿಹಾರಗಳನ್ನು ನೀಡುವುದಾಗಿದೆ. ಇದು ಅಲ್ಪಾ ವಧಿಗೆ ಸಂಬಂಧಿಸಿಲ್ಲ; ಮುಂದಿನ 100 ವರ್ಷಗಳ ಕಾಲ ಭಾರತದಲ್ಲಿ ವಿಶ್ವಾಸಾರ್ಹ, ಗ್ರಾಹಕರೇ ಮೊದಲಿಗರು ಮತ್ತು ಅವರ ಸಂಪತ್ತು ವ್ಯವಹಾರಗಳ ಮೇಲ್ವಿಚಾರಣೆ ನಮ್ಮ ಹೊಣೆ” ಎಂದು ಸನ್ಲಾಮ್ ಗ್ರೂಪ್ನ ಸಿಇಒ ಪಾಲ್ ಹನ್ರಟ್ಟಿ ಹೇಳಿದರು.
ಕೃತಕ ಬುದ್ಧಿಮತ್ತೆಯು ಶ್ರೀರಾಮ್ ವೆಲ್ತ್ ವ್ಯವಹಾರಗಳ ಭಾಗವಾಗಿದೆ. ವೈಯಕ್ತಿಕ ಸಲಹೆ, ತೀಕ್ಷ್ಣ ಅಪಾಯದ ಪ್ರೊಫೈಲಿಂಗ್ ಮತ್ತು ನೈಜ-ಸಮಯದ ಪೋರ್ಟ್ಫೋಲಿಯೊ ಶಿಫಾರಸುಗಳನ್ನು ಸಕ್ರಿಯ ಗೊಳಿಸುತ್ತಿದೆ. ಈ ಡಿಜಿಟಲ್-ಮೊದಲೆನ್ನುವ ಮನಸ್ಥಿತಿಯು ಕಂಪನಿಯ ಹೂಡಿಕೆದಾರರ ಅಗತ್ಯಗಳಿಗೆ ಪ್ರತಿಕ್ರಿಯಿಸುವುದಕ್ಕೆ ಸೀಮಿತವಾಗದೆ, ಗ್ರಾಹಕರ ಹಣಕಾಸಿನ ವ್ಯವಹಾರಗಳತ್ತ ಗಮನ ನೀಡುತ್ತದೆ.