ನವದೆಹಲಿ: ಉಗ್ರರ ವಿರುದ್ಧ ಹೋರಾಡಿ ವೀರ ಮರಣ ಹೊಂದಿದ್ದ ಮೇಜರ್ ಆಶೀಶ್ ದಹಿಯಾ ಸೇರಿದಂತೆ 33 ಜನ ಶೌರ್ಯರಿಗೆ ಶೌರ್ಯ ಚಕ್ರ(Shaurya Chakra) ಪ್ರಶಸ್ತಿ ಹಾಗೂ ಮರಣೋತ್ತರವಾಗಿ ನಾಲ್ಕ ಜನ ಸೇರಿದಂತೆ 6 ಕೀರ್ತಿ ಚಕ್ರ ಪ್ರಶಸ್ತಿಗಳನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಪ್ರದಾನ ಮಾಡಿದರು.
ಆಶೀಶ್ ಉಗ್ರರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದರು. ನಾಲ್ವರು ಉಗ್ರರನ್ನು ಬಲಿ ಪಡೆದು, 3 ಐಇಡಿಗಳನ್ನು ನಿಷ್ಕ್ರಿಯಗೊಳಿಸಿದ್ದರು. 2022ರಿಂದ ಈವರೆಗೆ 5 ಅತ್ಯಂತ ಅಪಾಯಕಾರಿ ಆಪರೇಷನ್ಗಳಲ್ಲಿ ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿ ನೀಡಲಾಗಿದೆ.
ಕೀರ್ತಿ ಚಕ್ರವು (Kirti Chakra) ಭಾರತದ 2ನೇ ಅತ್ಯುನ್ನತ ಶಾಂತಿ ಶೌರ್ಯ ಪ್ರಶಸ್ತಿಯಾಗಿದ್ದು, ಸಿಖ್ ಲೈಟ್ ಇನ್ಫ್ಯಾಂಟ್ರಿಯ ಕರ್ನಲ್ ಮನ್ಪ್ರೀತ್ ಸಿಂಗ್, ರಾಷ್ಟ್ರೀಯ ರೈಫಲ್ಸ್ನ ಇತರ ಇಬ್ಬರು ಸೇನಾ ಸಿಬ್ಬಂದಿ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಅಧಿಕಾರಿಗೆ ಮರಣೋತ್ತರವಾಗಿ ಪ್ರದಾನ ಮಾಡಲಾಯಿತು.