ಚಾಮರಾಜನಗರ ಸಾಮೂಹಿಕ ಹುಲಿ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ. ಕಾಡಿನಲ್ಲಿ ಕೀಟನಾಶಕ ಬೆರೆಸಿದ ಸತ್ತ ಹಸುವನ್ನು ತಂದು ಹಾಕಿದವರ್ಯಾರು ಅನ್ನೋದರ ರಹಸ್ಯ ಬೇಧಿಸಲಾಗ್ತಿದೆ.
ಹೀಗಾಗಿಯೇ ಸ್ಥಳಕ್ಕೆ ದನಗಾಹಿಗಳನ್ನು ಕರೆತಂದು ಮಾಹಿತಿ ಕಲೆಹಾಕಲಾಗ್ತಿದೆ. ಕೀಟನಾಶಕವನ್ನು ಬೆರೆಸಿದ್ದ ಸತ್ತು ಹಸುವಿನ ಮಾಲೀಕ ಯಾರು ಅನ್ನೋದು ಇನ್ನೂ ಗುಟ್ಟಾಗಿದೆ. ಹೀಗಾಗಿಯೇ ದನಗಾಹಿಗಳನ್ನು ಕರೆತಂದು ಗುರುತು ಪತ್ತೆ ಕಾರ್ಯ ಮಾಡಲಾಗ್ತಿದೆ. ಆದ್ರೆ ಸ್ಥಳೀಯರು ಮಾತ್ರ ಈ ಹಸು ನಮ್ಮದಲ್ಲಾ ಅಂತಿದ್ದಾರೆ. ಹಾಗಾಗಿ ಐದು ಹುಲಿಗಳ ಸಾವಿಗೆ ಕಾರಣವಾದವರ್ಯಾರು ಅನ್ನೋದನ್ನು ಪತ್ತೆ ಹಚ್ಚೋದು ಪೊಲೀಸರಿಗೂ ಸವಾಲಾಗಿ ಪರಿಣಮಿಸಿದೆ.