ಯಾದಗಿರಿ: ಭೀಮಾ ನದಿಗೆ ಇಬ್ಬರು ಯುವಕರು ಬಲಿಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹ ಶೋಧ ಕಾರ್ಯ ಇಂದಿಗೂ ಮುಂದುವರೆದಿದೆ.
ಮಾಚನೂರು ಗ್ರಾಮದ ಭೀಮಾನದಿಯಲ್ಲಿ ಶೋಧ ಕಾರ್ಯ ಆರಂಭವಾಗಿದೆ. ಇಬ್ಬರು ಯುವಕರು ದನ ಮೇಯಿಸಲು ಹೋಗಿದ್ದ ವೇಳೆ ನೀರು ಪಾಲಾಗಿದ್ದರು. ಘಟನೆ ನಡೆದು ಈಗಾಗಲೇ ನಾಲ್ಕು ದಿನ ಕಳೆದಿವೆ. ಭಾನುವಾರ ಓರ್ವ ಯುವಕನ ಮೃತದೇಹ ಪತ್ತೆಯಾಗಿದೆ. ಮತ್ತೋರ್ವನಿಗಾಗಿ ಹುಡುಕಾಟ ಆರಂಭವಾಗಿದೆ.
SDRF ಹಾಗೂ ಅಗ್ನಿಶಾಮಕ ದಳದಿಂದ ಸಿದ್ದಪ್ಪನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ನದಿಯಲ್ಲಿ ಬೋಟ್ ಇಳಿಸಿ ಶೋಧ ಕಾರ್ಯ ಮಾಡಲಾಗುತ್ತಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಮಾಚನೂರು ಗ್ರಾಮದ ಭೀಮಾನದಿಯಲ್ಲಿ ಹುಡುಕಾಟ ನಡೆಸಲಾಗಿದೆ.
ಇದೆ ಶುಕ್ರವಾರ ಭೀಮಾನದಿಯಲ್ಲಿ ಯುವಕರಿಬ್ಬರು ಕಣ್ಮರೆಯಾಗಿದ್ದರು. ನಿನ್ನೆ ಯುವಕ ಪರಶುರಾಮನ ಶವವಾಗಿ ಪತ್ತೆಯಾಗಿತ್ತು.ಆದರೆ, ಸಿದ್ದಪ್ಪ ಪತ್ತೆಯಾಗಿರಲಿಲ್ಲ. ಹೀಗಾಗಿ ಇಂದು ನಾಲ್ಕನೇ ದಿನ ಶೋಧ ಕಾರ್ಯ ಮುಂದುವರೆದಿದೆ.