ದಾವಣಗೆರೆ: ಹಾಡಹಗಲೇ ರೌಡಿಶೀಟರ್ ನನ್ನು ಭೀಕರವಾಗಿ ಕೊಚ್ಚಿ ಕೊಲೆಗೈದಿರುವ ಘಟನೆಯೊಂದು ನಗರದಲ್ಲಿ ನಡೆದಿದೆ.
ನಗರದ ಹದಡಿ ರಸ್ತೆಯ ಹತ್ತಿರ ಈ ಘಟನೆ ನಡೆದಿದೆ. ಐದಾರು ಜನರ ಗುಂಪಿನಿಂದ ರೌಡಿಶೀಟರ್ ಹತ್ಯೆಯಾಗಿದೆ. ಭೀಕರ ಹತ್ಯೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂತೋಷ್ ಅಲಿಯಾಸ್ ಕಣುಮ ಕೊಲೆಯಾದ ರೌಡಿಶೀಟರ್(48) ಎನ್ನಲಾಗಿದೆ. ಆಟೋದಲ್ಲಿ ಬಂದ ಐದಾರು ಜನರ ಗುಂಪು ಭೀಕರವಾಗಿ ಕೊಲೆಗೈದಿದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.