ಭಾರತ ಸಿನಿರಂಗದ ಅತ್ಯಂತ ನಿರೀಕ್ಷಿತ ಸಿನಿಮಾಗಳಲ್ಲಿ ಸದ್ಯ ರಾಮಾಯಣಕ್ಕೆ ಅಗ್ರ ಸ್ಥಾನವಿದೆ.
ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಈಗಾಗಲೇ ರಾಮಾಯಣದ ಬಗ್ಗೆ ಅಭಿಮಾನಿಗಳು ಸೇರಿದಂತೆ ಸಿನಿ ದುನಿಯಾ ಅತಿರಥರಲ್ಲೂ ಅಪಾರ ನಿರೀಕ್ಷೆಯಿದೆ. ಬಾಲಿವುಡ್ ಸೂಪರ್ ಸ್ಟಾರ್ ರಣಬೀರ್ ಕಪೂರ್ ರಾಮನಾಗಿ ನಟಿಸುತ್ತಿದ್ದರೆ, ಸಾಯಿ ಪಲ್ಲವಿ ಸೀತಾ ಮಾತೆಯಾಗುತ್ತಿದ್ದಾರೆ. ಆದರೆ, ಇದೆಲ್ಲವನ್ನೂ ಮೀರಿದ ವಿಷಯ ಏನಂದರೆ, ರಾವಣನ ಪಾತ್ರಧಾರಿ ಯಶ್. ಆದರೆ, ಯಶ್ ಈ ಸಿನಿಮಾಗೆ
ಪಡೆಯುತ್ತಿರುವ ಸಂಭಾವನೆ ಎಷ್ಟು?
ಹಾಗೆ ನೋಡಿದರೆ, ರಾಮಾಯಣ ಆರಂಭದಿಂದಲೂ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಬಂದಿದೆ. ಆರಂಭದಲ್ಲಿ ರಾಮನ ಪಾತ್ರಕ್ಕೆ ರಣಬೀರ್ ಆಯ್ಕೆಯಾದರೂ ಸೀತೆ ಪಾತ್ರದ ವಿಚಾರದಲ್ಲಿ ಒಂದಷ್ಟು ಗೊಂದಲ ವಿರೋಧಗಳು ಮೂಡಿದ್ದು ಸುಳ್ಳಲ್ಲ. ಈ ನಡುವೆ ರಾವಣನಾಗಿ ಯಶ್ ಬಣ್ಣ ಹಚ್ಚುವುದು ಪಕ್ಕಾ ಅಂತಿದ್ದಂತೆ ಅವರು ಈ ಪ್ರಾಜೆಕ್ಟ್ ನಿಂದಲೇ ಹೊರ ಹೋದರು ಎಂಬ ಸುದ್ದಿ ಹೊರಬಿತ್ತು.
ಆದರೆ, ಅಚ್ಚರಿ ವಿಚಾರ ಇರುವುದೇ ಇಲ್ಲಿ. ಅಸಲಿಗೆ ಯಶ್ ರ ರಾವಣನ ಪಾತ್ರಕ್ಕೆ ನಿರ್ಮಾಪಕರು ಮೊದಲಿಗೆ 150 ಕೋಟಿಯ ಸಂಭಾವನೆ ನಿಗದಿ ಮಾಡಿದರು. ಸದ್ಯಕ್ಕೆ ಭಾರತದ ಅತಿ ದುಬಾರಿ ವಿಲನ್ ಯಶ್ ಅಂತಲೇ ಹೇಳಲಾಗುತ್ತಿತ್ತು. ಆದರೆ, ಈ ಆಫರನ್ನು ಯಶ್ ಸಾರಾಸಗಟ ತಳ್ಳಿ ಹಾಕಿದರು. ಹಾಗೆ ನೋಡಿದರೆ, ಯಶ್ ಕೆಜಿಎಫ್ ಸಿನಿಮಾಗೆ ಪಡೆದದ್ದು 15 ಕೋಟಿ ಮಾತ್ರ ಅಲ್ಲಿಗೆ ಸರಿಸುಮಾರು 13 ಪಟ್ಟು ಹೆಚ್ಚಿನ ಸಂಭಾವನೆ ಆಫರ್ ಮಾಡಲಾಗಿತ್ತು. ಈ ಮೂಲಕ ಓರ್ವ ನಟ ತನ್ನ ಸಂಭಾವನೆಯನ್ನು ಪ್ರತಿಶತ 1200ಕ್ಕೂ ಹೆಚ್ಚು ಏರಿಕೆ ಕಂಡತಾಗಿತ್ತು. ಆದ್ರೆ ಯಶ್ ಇದಕ್ಕೆ ಸುತಾರಾಮ್ ಒಪ್ಪಲೇ ಇಲ್ಲ. ಆಗ ನಿರ್ಮಾಪಕರು ಚಿತ್ರದ ವಿತರಣೆಯಲ್ಲಿ 50 ಕೋಟಿಯ ಲಾಭಾಂಶದ ಮತ್ತೊಂದು ಆಫರ್ ನೀಡಿದ್ರು. ಬಟ್ ಇದಕ್ಕೂ ಗೂಗ್ಲಿ ಕಿಂಗ್ ಬಗ್ಗಲಿಲ್ಲ.
ನಿರ್ಮಾಪಕನಾಗಿ ಎಂಟ್ರಿ ಕೊಟ್ಟ ರಾವಣ
ಹಾಗೆ ನೋಡಿದ್ರೆ ಯಶ್ ನಿರ್ಮಾಪಕರ 200 ಕೋಟಿ ಆಫರ್ ಒಪ್ಪಿಕೊಂಡು ರಾವಣನಾಗಿದ್ರೆ ಸೇಫ್ ಅನ್ನಬಹುದಿತ್ತು. ಬಟ್ ಅವರು ಹಾಗೆ ಮಾಡ್ಲಿಲ್ಲ. ಕೇವಲ ನಟನಾಗಿ ಅಲ್ಲ ಜೊತೆಗೆ ನಿರ್ಮಾಪಕನಾಗಿಯೂ ಸಿನಿಮಾದ ಅಂಗವಾಗ್ತೀನಿ ಅಂದಿದ್ರು ಯಶ್. ಹೀಗಾಗಿ ರಾಮಾಯಣದ ಭಾಗವಾಗಲು ಮುಂದಾದ ಯಶ್ ಲೆಕ್ಕಾಚಾರವಾದ್ರು ಏನು. ಎರಡು ಭಾಗಗಳಲ್ಲಿ ಬರ್ತಿರೋ ರಾಮಾಯಣ ಹೇಳಿ ಕೇಳಿ ಭಾರತೀಯರ ಅಂತರಗದಲ್ಲಿ ಅವಿತಿರುವ ಶ್ರದ್ಧೆಯ ಅವಿಭಾಜ್ಯ. ಒಂದೊಮ್ಮೆ ಒಂದೊಂದು ಭಾಗವೂ 700 ರಿಂದ 800 ಕೋಟಿ ಬಾಚಿಕೊಂಡ್ರೂ ಯಶ್ ಜೋಳಿಗೆಗೆ 500 ಕೋಟಿಗೂ ಹೆಚ್ಚು ಹಣ ಜಮೆಯಾಗಲಿದೆ. ಈ ಸ್ಮಾರ್ಟ್ ಲೆಕ್ಕಾಚಾರಾದಲ್ಲೇ ಯಶ್ ನಿರ್ಮಾಪಕರಾಗಲು ಮುಂದಾಗಿದ್ದು, ಒಂದೊಮ್ಮೆ ಚಿತ್ರರಂಗದ ಬಾಹುಬಲಿ ದಾಖಲೆಗಳು ಧೂಳಿಪಟವಾದ್ರೆ, 1000 ಕೋಟಿಯ ಬಾಕ್ಸ್ ಆಪೀಸ್ ಕಲೆಕ್ಷನ್ ಆದ್ರೆ ಎರಡು ಭಾಗಗಳಲ್ಲಿ 2 ಸಾವಿರ ಕೋಟಿ ಬಾಚಿದ ಹಾಗಾಗುತ್ತೆ. ಒಟ್ಟಿನಲ್ಲಿ ಯಶ್ ಸಂಭಾವನೆ ಇಲ್ಲದೆ. ನಿರ್ಮಾಪಕರಾಗಿ ನೂರಾರು ಕೋಟಿ ಬಾಚುವ ಪ್ಲ್ಯಾನ್ ಮಾಡಿದ್ದಾರೆ.