ಆತುರ…ತರಾತುರಿ….ಧಾವಂತ….ಎಲ್ಲವಕ್ಕೂ ಒಂದೇ ಅರ್ಥವಿದ್ದರೂ ಈ ಮೂರು ಪದಗಳಲ್ಲಿ ಆರ್ ಸಿಬಿ ವಿಜಯೋತ್ಸವದ ಕಾರ್ಯಕ್ರಮ ಆಯೋಜನೆಯಲ್ಲಿ ಈ ಮೂರರಲ್ಲಿ ಒಂದಂತೂ ಅನ್ವಯವಾಗೋದು ನಿಶ್ಚಿತ. ಹಿಂದಿನ ರಾತ್ರಿ ಕರುನಾಡು ಸಂಭ್ರಮದಲ್ಲಿ ಮುಳುಗಿದರೆ ಮರುದಿನದ ಹೊತ್ತಿಗೆ ಸೂತಕದ ಕರಿನೆರಳು ಆವರಿಸಿಬಿಟ್ಟಿದೆ. ಹಾಗಿದ್ದರೆ ಈ ಮಹಾ ದುರಂತದ ಹೊಣೆಗಾರರು ಯಾರು. ಕಪ್ ಗೆದ್ದು ತಂದವರ ಸ್ವಾಗತಕ್ಕೆ ಇಷ್ಟು ಅರ್ಜೆಂಟ್ ಆದರೂ ಏನಿತ್ತು?
ಕಾರ್ಯಕ್ರಮದ ಕರ್ತೃ ಕೆಎಸ್ಸಿಎನಾ ಇಲ್ಲಾ ಸರ್ಕಾರವಾ…?
ಕಳೆದ ರಾತ್ರಿಯಷ್ಟೇ ಅಹಮದಾಬಾದ್ ನಲ್ಲಿ ಆರ್ ಸಿಬಿ ಆಟಗಾರರು ಕಪ್ ಮುಡಿಗೋರಿಸಿಕೊಂಡಿದ್ದರು. ಇತ್ತ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಸಂಭ್ರಮ ತಮ್ಮ ಪರಮಾವಧಿ ಮೀರಿತ್ತು. ಗೆದ್ದ ತಂಡಕ್ಕೊಂದು ಅದ್ಧೂರಿ ಸ್ವಾಗತ ಬೇಕಿರುವುದು ಆಗತ್ಯ. ಹಾಗಂತಾ ನಿನ್ನೆಯ ಮಹಾ ದುರಂತಕ್ಕೀಗ ಹೊಣೆಯಾರು? ಬೆಂಗಳೂರು ವಿಜಯೋತ್ಸವಕ್ಕೆ ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು ಅದ್ಧೂರಿಯಾಗಿ ಸ್ವಾಗತಕೋರಿದರೆ ಈ ಸಾವು- ನೋವು ಸಂಭವಿಸುತ್ತಿರಲಿಲ್ಲ.

ಇವತ್ತು ಸಮಸ್ತ ಕರುನಾಡು ಮಾಡುತ್ತಿರುವ ಪ್ರಶ್ನೆ ಕೂಡಾ ಇದೇ. ತಮ್ಮ ನೆಚ್ಚಿನ ಆಟಗಾರರ ನೋಡಲು ಬಂದು ಪ್ರಾಣತೆತ್ತ 11 ಮಂದಿ ಸಾವಿಗೆ ಯಾರು ಜವಾಬ್ದಾರರು. ಈ ಕಾರ್ಯಕ್ರಮದ ಆಯೋಜಕತ್ವ ಕೆಎಸ್ ಸಿಎ ಹೊಣೆಗಾರಿಕೆಯಾ ಇಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿಯಾ?
ಕಾಲ್ತುಳಿತಕ್ಕೆ ಕಾರಣವಾದ ಆ ಅವ್ಯವಸ್ಥೆಗಳಾದ್ರು ಏನು…?
ಕೊಹ್ಲಿ ಸೇರಿದಂತೆ ಆರ್ ಸಿಬಿ ಆಟಗಾರರನ್ನು ನೋಡಲೆಂದು ಬಂದವರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ಕಾಲ್ತುಳಿತ ಪ್ರಕರಣವನ್ನು ಅವಲೋಕಿಸಿದರೆ ಇದರ ಹಿಂದೆ ಸಾಲು ಸಾಲು ಪ್ರಮಾದಗಳು ಎದ್ದು ಕಾಣುತ್ತವೆ.
ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ
ಹಾಗೆ ನೋಡಿದರೆ ಕೇವಲ 24 ಗಂಟೆ ಕೂಡ ಆಗಿರಲಿಲ್ಲ. ಆರ್ ಸಿಬಿ ಸ್ವಾಗತ ಕಾರ್ಯಕ್ರಮವನ್ನು ತುಂಬಾ ಹಗುರವಾಗಿ ಯೋಚಿಸಿದ ಸರ್ಕಾರ ತರಾತುರಿಯಲ್ಲೇ ಯೋಜನೆ ರೂಪಿಸಿಬಿಟ್ಟಿತು. ಪೊಲೀಸರ ನಿಯೋಜನೆ ವಿಚಾರದಲ್ಲಿ ತಪ್ಪು ಲೆಕ್ಕ ಮಾಡಿದ ಸರ್ಕಾರ ಸಂಘಟಿತ ಪೂರ್ವ ತಯಾರಿ ಇಲ್ಲದೆ 11 ಜನರ ಸಾವಿಗೆ ಕಾರಣೀಕರ್ತನಾಗಿದೆ.
ಎರಡೆರೆಡು ಕಡೆ ಕಾರ್ಯಕ್ರಮ ಅನವಶ್ಯಕ
ಇನ್ನು ಎರಡನೇ ಪ್ರಮುಖ ಕಾರಣ ಸರ್ಕಾರ ಈ ಕಾರ್ಯಕ್ರಮವನ್ನು ಎರಡೆರೆಡು ಕಡೆ ಆಯೋಜಿಸಿದ್ದು. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಹೀಗೆ ಎರಡು ಸ್ಥಳಗಳ ಆಯ್ಕೆ ಅನವಶ್ಯಕವಾಗಿತ್ತು ಅನ್ನೋ ಮಾತುಗಳೀಗ ಕೇಳಿ ಬರುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನಾ ಸಂಭ್ರಮಾಚರಣೆ ಬೇಕಿತ್ತಾ ಅನ್ನೋದು ಕೂಡಾ ಈಗಿರುವ ಪ್ರಶ್ನೆ.
ಅಭಿಮಾನಿಗಳ ಸುನಾಮಿ ಅಂದಾಜಿಸದ ಸರ್ಕಾರ
ಇದೊಂದು ದೊಡ್ಡ ಲೆಕ್ಕವೇ ಸರ್ಕಾರವನ್ನಿಂದು ಇಕ್ಕಟ್ಟಿಗೆ ಸಿಲುಕಿಸಿದೆ. 2 ಕಡೆ ಕಾರ್ಯಕ್ರಮ ರೂಪಿಸಿದ್ದ ಸರ್ಕಾರ ಅಭಿಮಾನಿಗಳ ಜನಸಾಗರದ ಲೆಕ್ಕದಲ್ಲಿ ದಿಕ್ಕು ತಪ್ಪಿತ್ತು. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಬರೋಬ್ಬರಿ 3 ಲಕ್ಷದಷ್ಟು ಅಭಿಮಾನಿಗಳ ಸುನಾಮಿ ಹರಿದು ಬಂದಿದೆ. ಈ ತಪ್ಪು ಗಣಿತವೇ 11 ಮಂದಿಯ ಪ್ರಾಣವನ್ನಿಂದು ಇನ್ನಿಲ್ಲಂತಾಗಿಸಿದೆ.
ವಾರದ ದಿನವೇ ಕಾರ್ಯಕ್ರಮ ಆಯೋಜನೆ
ಬೆಂಗಳೂರಲ್ಲಿ ಸಹಜವಾಗಿ ಇಂಥಾ ಕಾರ್ಯಕ್ರಮವನ್ನು ವೀಕೆಂಡ್ ನಲ್ಲಿ ಆಯೋಜಿಸಿದ್ರೆ ಈ ಪಾಟಿ ಅವ್ಯವಸ್ಥೆ ಆಗುತ್ತಿರಲಿಲ್ಲ. ಸೂಕ್ತ ರೀತಿಯಲ್ಲಿ ತಯಾರಿ ಮಾಡಿಕೊಂಡು ಶನಿವಾರ ಇಲ್ಲವೇ ಭಾನುವಾರದಂದು ವಿಜಯೋತ್ಸವವವನ್ನು ಆಯೋಜಿಸಿದರೆ ಸಂಚಾರ ಸೇರಿದಂತೆ ಜನರ ನಿಯಂತ್ರಣವೂ ಅಲ್ಪ ಅನೂಕೂಲಕರವಾಗಿರ್ತಿತ್ತು. ತರಾತುರಿಯಲ್ಲಿ ವೀಕ್ ಡೇ ನಲ್ಲೇ ವಿಜಯಯಾತ್ರೆ ಸಂಯೋಜನೆ ಎಲ್ಲರ ಲೆಕ್ಕವನ್ನು ತಲೆಕೆಳಗಾಗಿಸಿತ್ತು.

ಅವ್ಯವಸ್ಥೆಯ ಆಗರ ಚಿನ್ನಸ್ವಾಮಿ ಸ್ಟೇಡಿಯಂ
ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ ಅನ್ನೋದು ಈಗ ಬಟಾ ಬಯಲಾಗಿದೆ. ಕೇವಲ 35 ಸಾವಿರ ಜನರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ದೊಡ್ಡ ಎಡವಟ್ಟು. ಲಕ್ಷಾದಿಯಾಗಿ ಹರಿದು ಬಂದವರು ಒಳಹೋಗಲು ಸೂಕ್ತ ಗೇಟ್ ಇಲ್ಲದೆ ಒದ್ದಾಡಿ ಉಸಿರುಗಟ್ಟಿ ಪ್ರಾಣತೆತ್ತಿದ್ದಾರೆ. ಒಟ್ನಲ್ಲಿ, ಯಾರದ್ದೋ ತಪ್ಪಿಗೆ ಈ 11 ಜೀವಗಳಂತೂ ಬಲಿಯಾಗಿವೆ. ಅಭಿಮಾನ ಮೆರೆಯಲು ಬಂದವರ ಮನೆಯಲ್ಲೀಗ ಸೂತಕ ಆವರಿಸಿದೆ. ಆದ್ರೆ ಈ ಸಾವಿಗೆ ಹೊಣೆಯಾರು ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ನಿಗೂಢವಾಗಿದೆ.ಆರ್ ಸಿಬಿ ವಿಜಯೋತ್ಸವವಾಯ್ತು ಮರಣೋತ್ಸವ; 11 ಅಮಾಯಕರ ಸಾವಿಗೆ ಈಗ ಹೊಣೆಯಾರು?
ಆತುರ…ತರಾತುರಿ….ಧಾವಂತ….ಎಲ್ಲವಕ್ಕೂ ಒಂದೇ ಅರ್ಥವಿದ್ದರೂ ಈ ಮೂರು ಪದಗಳಲ್ಲಿ ಆರ್ ಸಿಬಿ ವಿಜಯೋತ್ಸವದ ಕಾರ್ಯಕ್ರಮ ಆಯೋಜನೆಯಲ್ಲಿ ಈ ಮೂರರಲ್ಲಿ ಒಂದಂತೂ ಅನ್ವಯವಾಗೋದು ನಿಶ್ಚಿತ. ಹಿಂದಿನ ರಾತ್ರಿ ಕರುನಾಡು ಸಂಭ್ರಮದಲ್ಲಿ ಮುಳುಗಿದರೆ ಮರುದಿನದ ಹೊತ್ತಿಗೆ ಸೂತಕದ ಕರಿನೆರಳು ಆವರಿಸಿಬಿಟ್ಟಿದೆ. ಹಾಗಿದ್ದರೆ ಈ ಮಹಾ ದುರಂತದ ಹೊಣೆಗಾರರು ಯಾರು. ಕಪ್ ಗೆದ್ದು ತಂದವರ ಸ್ವಾಗತಕ್ಕೆ ಇಷ್ಟು ಅರ್ಜೆಂಟ್ ಆದರೂ ಏನಿತ್ತು?
ಕಾರ್ಯಕ್ರಮದ ಕರ್ತೃ ಕೆಎಸ್ಸಿಎನಾ ಇಲ್ಲಾ ಸರ್ಕಾರವಾ…?
ಕಳೆದ ರಾತ್ರಿಯಷ್ಟೇ ಅಹಮದಾಬಾದ್ ನಲ್ಲಿ ಆರ್ ಸಿಬಿ ಆಟಗಾರರು ಕಪ್ ಮುಡಿಗೋರಿಸಿಕೊಂಡಿದ್ದರು. ಇತ್ತ ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಸಂಭ್ರಮ ತಮ್ಮ ಪರಮಾವಧಿ ಮೀರಿತ್ತು. ಗೆದ್ದ ತಂಡಕ್ಕೊಂದು ಅದ್ಧೂರಿ ಸ್ವಾಗತ ಬೇಕಿರುವುದು ಆಗತ್ಯ. ಹಾಗಂತಾ ನಿನ್ನೆಯ ಮಹಾ ದುರಂತಕ್ಕೀಗ ಹೊಣೆಯಾರು? ಬೆಂಗಳೂರು ವಿಜಯೋತ್ಸವಕ್ಕೆ ಒಂದಷ್ಟು ಪೂರ್ವ ತಯಾರಿ ಮಾಡಿಕೊಂಡು ಅದ್ಧೂರಿಯಾಗಿ ಸ್ವಾಗತಕೋರಿದರೆ ಈ ಸಾವು- ನೋವು ಸಂಭವಿಸುತ್ತಿರಲಿಲ್ಲ. ಇವತ್ತು ಸಮಸ್ತ ಕರುನಾಡು ಮಾಡುತ್ತಿರುವ ಪ್ರಶ್ನೆ ಕೂಡಾ ಇದೇ. ತಮ್ಮ ನೆಚ್ಚಿನ ಆಟಗಾರರ ನೋಡಲು ಬಂದು ಪ್ರಾಣತೆತ್ತ 11 ಮಂದಿ ಸಾವಿಗೆ ಯಾರು ಜವಾಬ್ದಾರರು. ಈ ಕಾರ್ಯಕ್ರಮದ ಆಯೋಜಕತ್ವ ಕೆಎಸ್ ಸಿಎ ಹೊಣೆಗಾರಿಕೆಯಾ ಇಲ್ಲಾ ರಾಜ್ಯ ಸರ್ಕಾರದ ಜವಾಬ್ದಾರಿಯಾ?
ಕಾಲ್ತುಳಿತಕ್ಕೆ ಕಾರಣವಾದ ಆ ಅವ್ಯವಸ್ಥೆಗಳಾದ್ರು ಏನು…?
ಕೊಹ್ಲಿ ಸೇರಿದಂತೆ ಆರ್ ಸಿಬಿ ಆಟಗಾರರನ್ನು ನೋಡಲೆಂದು ಬಂದವರು ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ರಾಜ್ಯದ ಎರಡನೇ ಅತಿ ದೊಡ್ಡ ಕಾಲ್ತುಳಿತ ಪ್ರಕರಣವನ್ನು ಅವಲೋಕಿಸಿದರೆ ಇದರ ಹಿಂದೆ ಸಾಲು ಸಾಲು ಪ್ರಮಾದಗಳು ಎದ್ದು ಕಾಣುತ್ತವೆ.
ಪೂರ್ವ ತಯಾರಿ ಇಲ್ಲದೆ ಕಾರ್ಯಕ್ರಮ
ಹಾಗೆ ನೋಡಿದರೆ ಕೇವಲ 24 ಗಂಟೆ ಕೂಡ ಆಗಿರಲಿಲ್ಲ. ಆರ್ ಸಿಬಿ ಸ್ವಾಗತ ಕಾರ್ಯಕ್ರಮವನ್ನು ತುಂಬಾ ಹಗುರವಾಗಿ ಯೋಚಿಸಿದ ಸರ್ಕಾರ ತರಾತುರಿಯಲ್ಲೇ ಯೋಜನೆ ರೂಪಿಸಿಬಿಟ್ಟಿತು. ಪೊಲೀಸರ ನಿಯೋಜನೆ ವಿಚಾರದಲ್ಲಿ ತಪ್ಪು ಲೆಕ್ಕ ಮಾಡಿದ ಸರ್ಕಾರ ಸಂಘಟಿತ ಪೂರ್ವ ತಯಾರಿ ಇಲ್ಲದೆ 11 ಜನರ ಸಾವಿಗೆ ಕಾರಣೀಕರ್ತನಾಗಿದೆ.
ಎರಡೆರೆಡು ಕಡೆ ಕಾರ್ಯಕ್ರಮ ಅನವಶ್ಯಕ
ಇನ್ನು ಎರಡನೇ ಪ್ರಮುಖ ಕಾರಣ ಸರ್ಕಾರ ಈ ಕಾರ್ಯಕ್ರಮವನ್ನು ಎರಡೆರೆಡು ಕಡೆ ಆಯೋಜಿಸಿದ್ದು. ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಹೀಗೆ ಎರಡು ಸ್ಥಳಗಳ ಆಯ್ಕೆ ಅನವಶ್ಯಕವಾಗಿತ್ತು ಅನ್ನೋ ಮಾತುಗಳೀಗ ಕೇಳಿ ಬರುತ್ತಿವೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪುನಾ ಸಂಭ್ರಮಾಚರಣೆ ಬೇಕಿತ್ತಾ ಅನ್ನೋದು ಕೂಡಾ ಈಗಿರುವ ಪ್ರಶ್ನೆ.
ಅಭಿಮಾನಿಗಳ ಸುನಾಮಿ ಅಂದಾಜಿಸದ ಸರ್ಕಾರ
ಇದೊಂದು ದೊಡ್ಡ ಲೆಕ್ಕವೇ ಸರ್ಕಾರವನ್ನಿಂದು ಇಕ್ಕಟ್ಟಿಗೆ ಸಿಲುಕಿಸಿದೆ. 2 ಕಡೆ ಕಾರ್ಯಕ್ರಮ ರೂಪಿಸಿದ್ದ ಸರ್ಕಾರ ಅಭಿಮಾನಿಗಳ ಜನಸಾಗರದ ಲೆಕ್ಕದಲ್ಲಿ ದಿಕ್ಕು ತಪ್ಪಿತ್ತು. ವಿಧಾನಸೌಧ, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿ ಬರೋಬ್ಬರಿ 3 ಲಕ್ಷದಷ್ಟು ಅಭಿಮಾನಿಗಳ ಸುನಾಮಿ ಹರಿದು ಬಂದಿದೆ. ಈ ತಪ್ಪು ಗಣಿತವೇ 11 ಮಂದಿಯ ಪ್ರಾಣವನ್ನಿಂದು ಇನ್ನಿಲ್ಲಂತಾಗಿಸಿದೆ.
ವಾರದ ದಿನವೇ ಕಾರ್ಯಕ್ರಮ ಆಯೋಜನೆ
ಬೆಂಗಳೂರಲ್ಲಿ ಸಹಜವಾಗಿ ಇಂಥಾ ಕಾರ್ಯಕ್ರಮವನ್ನು ವೀಕೆಂಡ್ ನಲ್ಲಿ ಆಯೋಜಿಸಿದ್ರೆ ಈ ಪಾಟಿ ಅವ್ಯವಸ್ಥೆ ಆಗುತ್ತಿರಲಿಲ್ಲ. ಸೂಕ್ತ ರೀತಿಯಲ್ಲಿ ತಯಾರಿ ಮಾಡಿಕೊಂಡು ಶನಿವಾರ ಇಲ್ಲವೇ ಭಾನುವಾರದಂದು ವಿಜಯೋತ್ಸವವವನ್ನು ಆಯೋಜಿಸಿದರೆ ಸಂಚಾರ ಸೇರಿದಂತೆ ಜನರ ನಿಯಂತ್ರಣವೂ ಅಲ್ಪ ಅನೂಕೂಲಕರವಾಗಿರ್ತಿತ್ತು. ತರಾತುರಿಯಲ್ಲಿ ವೀಕ್ ಡೇ ನಲ್ಲೇ ವಿಜಯಯಾತ್ರೆ ಸಂಯೋಜನೆ ಎಲ್ಲರ ಲೆಕ್ಕವನ್ನು ತಲೆಕೆಳಗಾಗಿಸಿತ್ತು.
ಅವ್ಯವಸ್ಥೆಯ ಆಗರ ಚಿನ್ನಸ್ವಾಮಿ ಸ್ಟೇಡಿಯಂ
ನಗರದ ಹೃದಯ ಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣ ಅವ್ಯವಸ್ಥೆಗಳ ಆಗರ ಅನ್ನೋದು ಈಗ ಬಟಾ ಬಯಲಾಗಿದೆ. ಕೇವಲ 35 ಸಾವಿರ ಜನರ ಸಾಮರ್ಥ್ಯದ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದೇ ದೊಡ್ಡ ಎಡವಟ್ಟು. ಲಕ್ಷಾದಿಯಾಗಿ ಹರಿದು ಬಂದವರು ಒಳಹೋಗಲು ಸೂಕ್ತ ಗೇಟ್ ಇಲ್ಲದೆ ಒದ್ದಾಡಿ ಉಸಿರುಗಟ್ಟಿ ಪ್ರಾಣತೆತ್ತಿದ್ದಾರೆ. ಒಟ್ನಲ್ಲಿ, ಯಾರದ್ದೋ ತಪ್ಪಿಗೆ ಈ 11 ಜೀವಗಳಂತೂ ಬಲಿಯಾಗಿವೆ. ಅಭಿಮಾನ ಮೆರೆಯಲು ಬಂದವರ ಮನೆಯಲ್ಲೀಗ ಸೂತಕ ಆವರಿಸಿದೆ. ಆದ್ರೆ ಈ ಸಾವಿಗೆ ಹೊಣೆಯಾರು ಅನ್ನೋ ಪ್ರಶ್ನೆಗೆ ಉತ್ತರ ಮಾತ್ರ ನಿಗೂಢವಾಗಿದೆ.