ಬೆಂಗಳೂರು: ಐಪಿಎಲ್ ಫೈನಲ್ ಕದನದಲ್ಲಿ ಪಂಜಾಬ್ ವಿರುದ್ಧ ಭರ್ಜರಿ ಜಯ ಸಾಧಿಸಿರುವ ಆರ್ ಸಿಬಿ ತಂಡ ಇಂದು ಮಧ್ಯಾಹ್ನ ಬೆಂಗಳೂರಿಗೆ ಆಗಮಿಸಲಿದೆ.
ಇಂದು ಮಧ್ಯಾಹ್ನ 1 ಗಂಟೆ ವೇಳೆ ಎಚ್ ಎಲ್ ಏರ್ ಪೋರ್ಟ್ ಗೆ ಆರ್ ಸಿಬಿ ತಂಡ ಬರಲಿದೆ. ಅಹ್ಮದಾಬಾದ್ ನಿಂದ ವಿಶೇಷ ವಿಮಾನದಲ್ಲಿ ಆರ್ ಸಿಬಿ ತಂಡ ಬಂದು ಇಳಿಯಲಿದೆ. ನಂತರ ಅಲ್ಲಿಂದ ತಾಜ್ ವೆಸ್ಟೆಂಡ್ ಗೆ ತೆರಳಲಿದ್ದಾರೆ.
ಸಿಗ್ನಲ್ ಫ್ರೀ ಟ್ರಾಫಿಕ್ ನಲ್ಲಿ ಆರ್ ಸಿ ಬಿ ತಂಡವನ್ನು ಬೆಂಗಳೂರು ಪೊಲೀಸರು ಕರೆ ತರಲಿದ್ದಾರೆ. ಐಪಿಲ್ ಕಪ್ ಗೆದ್ದು ತಂಡ ಬರುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಹೆಚ್ ಎ ಎಲ್ ಏರ್ ಪೋರ್ಟ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಲ್ಲದೇ, ಎಚ್ ಎ ಎಲ್ ಏರ ರ್ಪೋರ್ಟ್ ಗೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.