ಬೆಂಗಳೂರು: ಕಾಲ್ತುಳಿತ ದುರಂತ ಪ್ರಕರಣ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸೌಧ ಮುಂದೆ ವಿಜಯೋತ್ಸವಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಸರ್ಕಾರವು ಷರತ್ತು ವಿಧಿಸಿತ್ತು ಎಂಬುವುದು ತಿಳಿದು ಬಂದಿದೆ.
ಆರ್ ಸಿಬಿ ಸಂಭ್ರಮಾಚರಣೆ; ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ!
ಬೆಂಗಳೂರು: ಕಾಲ್ತುಳಿತ ದುರಂತ ಪ್ರಕರಣ ರಾಜ್ಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವಿಧಾನಸೌಧ ಮುಂದೆ ವಿಜಯೋತ್ಸವಕ್ಕೆ ಅವಕಾಶ ನೀಡಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಮಧ್ಯೆ ಸರ್ಕಾರವು ಷರತ್ತು ವಿಧಿಸಿತ್ತು ಎಂಬುವುದು ತಿಳಿದು ಬಂದಿದೆ.
- ಜನಸಂದಣಿ ಹೆಚ್ಚಾಗಿ ಸೇರುವ ಕಾರಣ ಈ ಕಾರ್ಯಕ್ರಮವನ್ನು ನಡೆಸುವಾಗ ಭವ್ಯ ಮೆಟ್ಟಿಲಿಗಾಗಲಿ, ಪ್ರತಿಮೆಗಾಗಲಿ, ರಸ್ತೆಗಾಗಲಿ, ಉದ್ಯಾನವನಕ್ಕಾಗಲಿ ಧಕ್ಕೆಯಾಗದಂತೆ ಮುಂಜಾಗ್ರತೆ ವಹಿಸಬೇಕು.
- ಸಂಚಾರ ವ್ಯವಸ್ಥೆಗೆ ಅಡಚಣೆಯಾಗದಂತೆ ಕಾರ್ಯಕ್ರಮವನ್ನು ನಡೆಸಬೇಕು. ಪೊಲೀಸ್ ಇಲಾಖೆಯ ಸಮನ್ವಯದೊಂದಿಗೆ ಕ್ರಮವಹಿಸುವುದು.
- ಕಚೇರಿ ಕೆಲಸ ಕಾರ್ಯಗಳಿಗೆ ತೊಂದರೆ ಆಗಬಾರದು.
- ಸ್ಥಳವನ್ನು ಸ್ವಚ್ಛವಾಗಿರಿಸುವುದು.
- ಸದರಿ ಕಾರ್ಯಕ್ರಮಕ್ಕೆ ಬರುವ ಆಹ್ವಾನಿತರಿಗೆ ಲಘು ಉಪಾಹಾರ ಅಥವಾ ಭೋಜನ ಕೂಟವನ್ನು ಏರ್ಪಡಿಸಿದಲ್ಲಿ, ಹೊರಗಡೆಯಿಂದ ಸಿದ್ಧಪಡಿಸಿದ ಆಹಾರ ಪದಾರ್ಥ ತರತಕ್ಕದ್ದು.
- ಕಾರ್ಯಕ್ರಮ ರದ್ದಾದಲ್ಲಿ ಮುಂಗಡವಾಗಿ ಪಾವತಿಸುವ ಸ್ವಚ್ಛತಾ ವೆಚ್ಚ ಹಿಂದಿರುಗಿಸಲಾಗುವುದಿಲ್ಲ.
- ಕಾರ್ಯಕ್ರಮ ನಡೆಸುವಾಗ ಯಾವುದೇ ರೀತಿಯ ಅವಘಡ ಸಂಭವಿಸಿದರೆ ತಮ್ಮ ಸಂಸ್ಥೆಯೇ ಪೂರ್ಣ ಜವಾಬ್ದಾರಿ ಇರುತ್ತದೆ.
- ವಿಧಾಸೌಧ ಕಟ್ಟಡದ ಸುತ್ತಮುತ್ತಲಿನ ಪುದೇಶ ಡ್ರೋನ್ ನಿಷೇಧಿತ ಪ್ರದೇಶ. ಡ್ರೋನ್ ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.
- ಅಗ್ನಿಶಾಮಕ ಇಲಾಖೆಯಿಂದ ಮುಂಜಾಗೃತ ಕ್ರಮವಾಗಿ ಅಗ್ನಿ ಶಾಮಕ ವಾಹನ ಮತ್ತು ಸಿಬ್ಬಂದಿ ನೇಮಿಸಿಕೊಳ್ಳುವುದು.
- ಆರೋಗ್ಯ ಇಲಾಖೆಯ ವೈದ್ಯರು ಮತ್ತು ಶುಶ್ರೂಕ ಸಿಬ್ಬಂದಿಗಳನ್ನು ನೇಮಿಸಿಕೊಳ್ಳವುದು. ಸೇರಿದಂತೆ ಇನ್ನೂ ಹಲವು ಷರತ್ತುಗಳನ್ನು ಸರ್ಕಾರ ವಹಿಸಿತ್ತು ಎನ್ನಲಾಗಿದೆ.