ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ (Rajath) ಹಾಗೂ ವಿನಯ್ ಗೆ ಸಂಕಷ್ಟ ತಪ್ಪುತ್ತಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ನನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ. ಅಲ್ಲದೇ, ವಿನಯ್ಗೆ (Vinay Gowda) 500 ರೂ. ದಂಡ ವಿಧಿಸಿ ರಿಲೀಫ್ ನೀಡಿದೆ.
ವಿನಯ್ ಮಾತನಾಡಿ, ರಜತ್ಗೆ ಜೈಲಿಗೆ ಹೋಗಿದ್ದು ಬೇಸರ ತಂದಿದೆ. ವಾರಂಟ್ ರಿಕಾಲ್ ಆಗಿರುವುದರಿಂದಾಗಿ ವಿನಯ್ಗೆ ಈ ಕೇಸ್ನಿಂದ ರಿಲೀಫ್ ಸಿಕ್ಕಿದೆ. ಕೋರ್ಟ್ಗೆ ವಕೀಲರೊಂದಿಗೆ ಹಾಜರಾಗಿ ವಿನಯ್ ಕ್ಷಮೆಯಾಚಿಸಿದ್ದಾರೆ. ಮುಂದಿನ ದಿನಗಳಲ್ಲಿ ವಿಚಾರಣೆಗೆ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಹೀಗಾಗಿ ವಿನಯ್ ಗೆ 500 ರೂ. ದಂಡವನ್ನು 24ನೇ ಎಸಿಎಂಎಂ ನ್ಯಾಯಾಲಯ ವಿಧಿಸಿದೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ವಿನಯ್ ಗೌಡ, ನಾನು ಅರ್ಜಿ ಹಾಕಿದ್ದಕ್ಕೆ ವಾರಂಟ್ ರಿಕಾಲ್ ಆಗಿತ್ತು. ನನಗೆ ವಾರಂಟ್ ಆಗಿರಲಿಲ್ಲ. ನಿನ್ನೆ ಸಂಜೆ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದೇನೆ. ವಕೀಲರು ಇಂದು ಕೋರ್ಟ್ ಬರಲು ಹೇಳಿದ್ದರು. ಹೀಗಾಗಿ ಅವರೊಂದಿಗೆ ತೆರಳಿದ್ದೆ ಎಂದಿದ್ದಾರೆ.