ಢಾಕಾ: ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ, ದಿ.ರವೀಂದ್ರನಾಥ್ ಠೂಗೂರ್ ಅವರ ಪೂರ್ವಜನರ ಮನೆಯ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ.
ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ರವೀಂದ್ರನಾಥ ಠಾಗೂರ್ (Rabindranath Tagore) ಪೂರ್ವಜರ ಮನೆ ಮೇಲೆ ಗುಂಪು ದಾಳಿ ನಡೆಸಿದೆ ಎನ್ನಲಾಗಿದೆ. ಬಾಂಗ್ಲಾದೇಶದ ಸಿರಾಜ್ಗಂಜ್ ಜಿಲ್ಲೆಯಲ್ಲಿ ಪೂರ್ವಜರ ಮನೆ ಇದೆ. ಸದ್ಯ ಅದು ವಸ್ತು ಸಂಗ್ರಹಾಲಯವಾಗಿದೆ. ಈಗ ಅದರ ಮೇಲೆ ದಾಳಿ ನಡೆದಿದೆ.
ಜೂ.8 ರಂದು ವಸ್ತುಸಂಗ್ರಹಾಲಯದ ಸಿಬ್ಬಂದಿ ಹಾಗೂ ಸಂದರ್ಶಕ ಶಾ ನೇವಾಜ್ ನಡುವೆ ಮೋಟಾರ್ ಸೈಕಲ್ ಪಾರ್ಕಿಂಗ್ ಶುಲ್ಕಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿತ್ತು. ಸೇಡಿಗೆ ಗುಂಪೊಂದು ದಾಳಿ ನಡೆಸಿದ್ದು, ವಸ್ತುಸಂಗ್ರಹಾಲಯದ ಸಭಾಂಗಣ, ಕಿಟಕಿ ಗಾಜುಗಳು, ಬಾಗಿಲುಗಳು ಮತ್ತು ಪೀಠೋಪಕರಣಗಳನ್ನು ಹಾನಿ ಮಾಡಿದೆ ಎನ್ನಲಾಗಿದೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಸುಮಾರು 60 ಜನರ ಮೇಲೆ ದೂರು ದಾಖಲಾಗಿದೆ.