ನಗರದ ಜಿಟಿ ಮಾಲ್ ನಲ್ಲಿ ಡಾ. ರಾಜ್ ಕಪ್ ಪ್ರಸ್ತುತ ಪಡಿಸುವ ಪ್ರೊಡ್ಯೂಸರ್ಸ್ ಗಳ ಕ್ರಿಕೆಟ್ ಲೀಗ್ ಪಂದ್ಯದ ಪ್ಲೇಯರ್ ಆಕ್ಷನ್ ಕಾರ್ಯಕ್ರಮಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.
ಈ ಕ್ರಿಕೆಟ್ ಲೀಗ್ ನಲ್ಲಿ ಒಟ್ಟು 12 ತಂಡಗಳು ಆಡಳಿದ್ದು, ಆಟಗಾರರ ಆಕ್ಷನ್ ನಡೆಯಿತು. ಈ ಸಮಾರಂಭದಲ್ಲಿ ಸಿನಿಕ್ಷೇತ್ರದ ಖ್ಯಾತ ನಿರ್ಮಾಪಕಕಾದ ವಿಶ್ವನಾಥ್, ಟಿಸಿ ವೆಂಕಟೇಶ್, ನರಸಿಂಹ, ರಮೇಶ್ ಕಶ್ಯಪ್, ನಟ ಧರ್ಮಣ್ಣ, ನಟ ಅನಿರುದ್ಧ್ ಮುಂತಾದವರು ಭಾಗಿಯಾಗಿದ್ದರು.
ಈ ವೇಳೆ ನಿರ್ಮಾಪಕ ಸಾರಾ ಗೋವಿಂದ ಮಾತನಾಡಿ, ಎಲ್ಲರೂ ಒಟ್ಟಾಗಿ ಪ್ರೀತಿ ವಿಶ್ವಾಸದಿಂದ ಈ ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಂಡು, ಪಂದ್ಯಾವಳಿ ಯಶಸ್ಸಿಗಾಗಿ ಹಾರೈಸೋಣ..ಕ್ರಿಕೆಟ್ ಲೀಗ್ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ನಿರ್ಮಾಪಕ ಬಾಮ ಹರೀಶ್ ಮಾತನಾಡಿ, ಕ್ರಿಕೆಟ್ ಆಯೋಜಿಸಿರುವ ರಾಜೇಶ್ ಅವರ ಪ್ರತೀ ಕೆಲಸವೂ ಯಶಸ್ವಿಯಾಗಲಿ, ಇಂತಹ ವಿಭಿನ್ನ ಪಂದ್ಯಾವಳಿಗೆ ಒಳ್ಳೆಯದಾಗಲಿ ಎಂದರು. ನಟ ಅನಿರುದ್ದ್ ಮಾತನಾಡಿ, ರಾಜೇಶ್ ಬ್ರಹ್ಮ ಹಲವು ವರ್ಷಗಳಿಂದ ರಾಜ್ ಕಪ್ ಆಯೋಜಿಸಿಕೊಂಡು ಬಂದಿದ್ದಾರೆ. ಅವರ ಎಲ್ಲಾ ಪ್ರಯತ್ನವೂ ಸಕ್ಸಸ್ ಕಾಣಲಿ. 12 ತಂಡಗಳಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಕ್ರಿಕೆಟ್ ಆಯೋಜಕ ರಾಜೇಶ್ ಬ್ರಹ್ಮ ಮಾತನಾಡಿ, ಸಾರಾ ಗೋವಿಂದ ನನಗೆ ಪ್ರತಿ ಬಾರಿ ಸಪೋರ್ಟ್ ಮಾಡಿದರು. ಉದಯ್ ಮೆಹ್ತಾ ಅವರು ಪ್ರತಿ ಬಾರಿ ನನ್ನ ಜೊತೆ ಇದ್ದರು. ನಿಮ್ಮೆಲ್ಲರ ಬೆಂಬಲ ನಮಗೆ ಇರಲಿ ಎಂದರು.
ಒಟ್ಟಿನಲ್ಲಿ ರಾಜ್ ಕಪ್ ಪ್ರಸ್ತುತಪಡಿಸುತ್ತಿರುವ ಪ್ರೊಡ್ಯೂಸರ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಗೆದ್ದ ತಂಡಕ್ಕೆ 3 ಲಕ್ಷ ರೂ. ಕ್ಯಾಶ್ ಬಹುಮಾನ ನೀಡಲಿದ್ದು, ಕ್ರಿಕೆಟ್ ಲೀಗ್ ಕ್ರಿಕೆಟ್ ಪ್ರೇಮಿಗಳ ಕುತೂಹಲ ಹೆಚ್ಚಿಸಿದೆ.