ತುಮಕೂರು: ಖದೀಮರಿಬ್ಬರು ಜೈಲಿನಿಂದ ಹೊರ ಬಂದ ಎರಡು ದಿನಗಳ ನಂತರ ಮತ್ತೆ ಕಂಬಿಯ ಹಿಂದೆ ಹೋಗಿರುವ ಘಟನೆ ನಡೆದಿದೆ.
ಹಾಸನ (Hassan) ಮೂಲದ ಸುದೀಪ್ (25) ಮತ್ತು ಈತನ ಗೆಳೆಯ ಶಾಯಿದ್ ಜೈಲು ಸೇರಿದ ಖದೀಮರು. ಸುದೀಪ್ ಹಾಗೂ ಶಾಯಿದ್ ತುಮಕೂರು (Tumakuru) ಮತ್ತು ಹಾಸನದಲ್ಲಿ ಜಿಲ್ಲೆಗಳಲ್ಲಿ ನಡೆದ ನಾಲ್ಕು ಸರಗಳ್ಳತನ ಪ್ರಕರಣಗಳ ಆರೋಪಿಗಳಾಗಿದ್ದರು. ಹೀಗಾಗಿ ಅವರನ್ನು ಪೊಲೀಸರು ಜೈಲಿಗೆ ಅಟ್ಟಿದ್ದಾರೆ.
ಸುದೀಪ್ ಹಿಂದೆ ಕಳ್ಳತನ ಪ್ರಕರಣದಲ್ಲಿ ರಾಮನಗರ ಜೈಲು ಸೇರಿದ್ದ. ಜೈಲಿನಲ್ಲಿ ಸುದೀಪ್ಗೆ ಶಾಯಿದ್ ಪರಿಚಯಾವಾಗಿದ್ದಾನೆ. ಜೂನ್ 13 ರಂದು ಸುದೀಪ್ ಬಿಡುಗಡೆಯಾಗಿ ಹೊರ ಬಂದಿದ್ದ. ಶಾಯಿದ್ ಇದಕ್ಕೂ ಮುಂಚೆಯೇ ಹೊರ ಬಂದಿದ್ದ.
ವಕೀಲರಿಗೆ ಫೀಸ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಶಾಯಿದ್ ಜೊತೆ ಸೇರಿ ಕಳ್ಳತನ ಮಾಡಿದ್ದಾನೆ. ಖದೀಮರು ತಮ್ಮ ಕೈ ಚಳಕ ತೋರುವ ಮುಂಚೆಯೇ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.