ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಸಚಿವ ಸಂಪುಟ ಸಭೆ ಹಿನ್ನಲೆ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ನಂದಿಗಿರಿಧಾಮ ದಲ್ಲಿ ಈಗಾಗಲೇ ಭರದಿಂದ ಸಿದ್ದತೆ ನಡೆಯುತ್ತಿದ್ದು, ಕೊಠಡಿಗಳ ಸಿದ್ದತೆ, ವಿದ್ಯುತ್ ರಸ್ತೆಗೆ ಡಾಂಬರು ಹಾಗೂ ಸುಣ್ಣ ಬಣ್ಣ ಬಳಿದು ತಯಾರಿ ಮಾಡಿಕೊಳ್ಳುತ್ತಿದ್ದಾರೆ.