ಅಹಮದಾಬಾದ್ ವಿಮಾನ ದುರಂತ ಪ್ರಕರಣದಲ್ಲಿ 100ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ನಗರದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಲವರಿಗೆ ರಕ್ತದ ಅನಿವಾರ್ಯತೆ ಎದುರಾಗಿದೆ. ಅದ್ರಲ್ಲೂ ಗಾಯಾಳುಗಳ ಪೈಕಿ ಕೆಲವರಿಗೆ ಓ ನೆಗೆಟಿವ್ ರಕ್ತದ ಅಗತ್ಯವಿದೆ. ಈ ನಿಟ್ಟಿನಲ್ಲೇ 300ಕ್ಕೂ ಹೆಚ್ಚು ಯೋಧರು ಇದೀಗ ರಕ್ತದಾನಕ್ಕೆ ಮುಂದಾಗಿದ್ದಾರೆ. ನಗರದ ವಿವಿದೆಡೆ ರಕ್ತದಾನ ಶಿಬಿರಗಳನ್ನು ತೆರೆಯಲಾಗಿದ್ದು, ನೂರಾರು ಯೋಧರು ರಕ್ತದಾನ ಮಾಡ್ತಿದ್ದಾರೆ. ಇಂದು ವಿಶ್ವ ರಕ್ತದಾನಿಗಳ ದಿನವಾಗಿರೋ ಸಂದರ್ಭದಲ್ಲೇ ಭಾರತೀಯ ಯೋಧರ ಈ ನಡೆ ದೇಶದೆಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
