ಮುಂಬೈ: ನಾಳೆ ತೆರೆಗೆ ಅಪ್ಪಳಿಸಬೇಕಿದ್ದ ಫುಲೆ ಚಲನಚಿತ್ರಕ್ಕೆ ಆರಂಭಿಕ ವಿಘ್ನ ಎದುರಾಗಿದೆ. ಸಾಮಾಜಿಕ ಹೋರಟಗಾರರಾದ ಫುಲೆ ದಂಪತಿ ಕುರಿತಾದ ಸಿನಿಮಾ ಬ್ರಾಹ್ಮಣ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಅನಂತ್ ಮಹದೇವನ್ ನಿರ್ದೇಶನದ ಸಿನಿಮಾದಲ್ಲಿ ಬ್ರಾಹ್ಮಣ ಸಮುದಾಯವನ್ನು ಅಪಮಾನಿಸಲಾಗಿದೆ ಅಂತಾ ಆರೋಪಿಸಲಾಗಿದೆ.
ಅಷ್ಟೇ ಅಲ್ಲಾ ಸಿನಿಮಾ ರಿಲೀಸ್ ಗೆ ತಡೆ ನೀಡಿ ಅಂತಲೂ ಮನವಿ ಮಾಡಿದೆ. ಈ ನಡುವೆ ಸೆನ್ಸಾರ್ ಮಂಡಳಿ ಸಿನಿಮಾದಲ್ಲಿರುವ ಜಾತಿಗಳ ಕುರಿತ ಪ್ರಸ್ತಾಪ, ಪೇಶ್ವೆ ಪದ ಬಳಕೆ ಸೇರಿದಂತೆ ಕೆಲ ಆಕ್ಷೇಪಾರ್ಯ ಸಂಭಾಷಣೆಗಳಿಗೂ ಕತ್ತರಿ ಹಾಕುವಂತೆ ಸೂಚಿಸಲಾಗಿದೆ.
ಈ ಹಿನ್ನಲೆಯಲ್ಲಿ ಸಿನಿಮಾ ಬಿಡುಗಡೆಯನ್ನು 2 ವಾರಗಳ ಮಟ್ಟಿಗೆ ಮುಂದೂಡಲು ನಿರ್ಧರಿಸಲಾಗಿದೆ. ಪ್ರತೀಕ್ ಗಾಂಧಿ ಮತ್ತು ಪತ್ರಲೇಖ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಸಿನಿಮಾ ಸಂಕಷ್ಟಕ್ಕೆ ಸಿಲುಕಿದಂತಾಗಿದೆ. ಈ ನಡುವೆ, ಸೆನ್ಸಾರ್ ಆಕ್ಷೇಪಗಳ ಬಗ್ಗೆ ಪ್ರತಿಕ್ರಿಯಿಸಿರುವ ನಿರ್ದೇಶಕ ಅನಂತ್ ಮಹದೇವನ್, ಚಿತ್ರದ ಕೆಲ ಸನ್ನಿವೇಶಗಳ ಬಗ್ಗೆ ತಪ್ಪು ಗ್ರಹಿಕೆಯಿದೆ ಇದರ ಬಗ್ಗೆ ಸ್ಪಷ್ಟನೆ ನೀಡುತ್ತೇವೆ ಎಂದಿದ್ದಾರೆ.