ದಾವಣಗೆರೆ: ನಗರದಲ್ಲಿ ಎಸ್ಪಿ ಉಮಾ ಪ್ರಶಾಂತ್ ರೌಡಿಗಳ ಪರೇಡ್ ನಡೆಸಿದ್ದಾರೆ.
ಈ ವೇಳೆ ಎಸ್ಪಿ ಉಮಾ ಪ್ರಶಾಂತ್ ಅವರು ರೌಡಿಗಳಿಗೆ ವಾರ್ನಿಂಗ್ ನೀಡಿದ್ದಾರೆ. ಡಿಎಆರ್ ಗ್ರೌಂಡ್ ನಲ್ಲಿ ನಗರದ ರೌಡಿಗಳಿಗೆ ವಾರ್ನಿಂಗ್ ಮಾಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಭಂಗ ತಂದರೆ ಗಡಿಪಾರು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಪರೇಡ್ ನಲ್ಲಿ 150 ರೌಡಿಗಳು ಭಾಗಿಯಾಗಿದ್ದರು. ಈ ವೇಳೆ ರೌಡಿ ಶೀಟರ್ ಶ್ರೀನಿವಾಸ ಅಲಿಯಾಸ್ ಮೊಟ್ ಬೆಳ್ ಸೀನಾಗೆ ವಾರ್ನಿಂಗ್ ಮಾಡಿದರು. ಕಾರ್ಪೊರೇಟರ್ ಇದ್ದಿರಿ ಅಂದ್ರೆ ನಾವು ಸುಮ್ಮನಿರಲ್ಲ. ಹುಡುಗರನ್ನು ಇಟ್ಟುಕೊಂಡು ಸೆಟಲ್ ಮೆಂಟ್, ರೌಡಿಜಂ ಮಾಡುವ ಹಾಗಿಲ್ಲ. ಏನ್ ಮಾಡಿದರೂ ನಮಗೆ ಗೊತ್ತಾಗತ್ತೆ. ಕಾರ್ಪೊರೇಟರ್ ಗೌರವದಿಂದ ಇರಬೇಕು ಎಂದು ವಾರ್ನ್ ಮಾಡಿದ್ದಾರೆ.