ನೆಲಮಂಗಲ: ಮಾದನಾಯಕನಹಳ್ಳಿ ಪೊಲೀಸರಿಂದ 60ಕ್ಕೂ ಅಧಿಕ ರೌಡಿಶೀಟರಗಳ ಪರೇಡ್ ನಡೆಸಲಾಗಿದೆ.
ನೆಲಮಂಗಲ ಉಪ ವಿಭಾಗದ ಮಾದನಾಯಕನಹಳ್ಳಿ ಪೊಲೀಸರು ಪರೇಡ್ ನಡೆಸಿದ್ದಾರೆ. ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರಗಳನ್ನು ಠಾಣೆಗೆ ಕರೆಯಿಸಿ ತಾಕೀತು ಮಾಡಲಾಗಿದೆ.
ನೆಲಮಂಗಲದ ಬೆತ್ತನಗೆರೆ ಶಂಕರ, ಬಂಡೆ ಮಂಜ ಸೇರಿದಂತೆ ಹಲವರು ಗೈರಾಗಿದ್ದರು. ರೌಡಿಶೀಟರ್ ಗಳ ಮಾಹಿತಿ ಜೊತೆಗೆ ಅವರ ಚಲನವಲನಗಳ ಪರಿಶೀಲನೆ ನಡೆಸಲು ಈ ವೇಳೆ ಸಿಬ್ಬಂದಿಗೆ ಹಿರಿಯ ಅಧಿಕಾರಿ ಸೂಚಿಸಿದರು. ಸನ್ನಡತೆಯ ಆಧಾರದ ಮೇಲೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕೆಲ ರೌಡಿಶೀಟರ್ ಪಟ್ಟಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. 10 ವರ್ಷದಿಂದ ಯಾವುದೇ ಪ್ರಕರಣದಲ್ಲಿ ಭಾಗಿಯಾಗದವರನ್ನು ಕೈಬಿಡುವ ಬಗ್ಗೆ ಪರಿಶೀಲನೆ ನಡೆಸಿ, ಭಾಗಿಯಾದವರ ಹಿನ್ನೆಲೆ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳಿಗೆ ಕಳುಹಿಸಲು ನಿರ್ಧರಿಸಲಾಗಿದೆ.