ಶಾಂತವಾಗಿದ್ದ ಪಹಲ್ಗಾಮ್ ಗೆ ನುಗ್ಗಿ ರಕ್ತದೋಕುಳಿದ ಆಡಿದ್ದ ಉಗ್ರರಿಗೀಗ ಮುಟ್ಟಿ ನೋಡಿಕೊಳ್ಳುವಂತೆ ಕೊಟ್ಟಿದೆ ಭಾರತ. ನರಸತ್ತವರಂತೆ ಬದುಕುತ್ತಿದ್ರೂ ಉತ್ತರನ ಪೌರುಷ ಮೆರೆಯಲು ಹೋಗಿ ಸಮಾಧಿಯಾಗಿದ್ದಾರೆ ಜಿಹಾದಿಗಳು. ಅದರಲ್ಲೂ ಲಷ್ಕರ್ ಮತ್ತು ಜೈಶ್ ಇನ್ನೆಂದೂ ಮೇಲೇಳಲು ಆಗದ ಹಾಗೆ ಗುನ್ನ ನೀಡಿದೆ ಹಿಂದೂಸ್ತಾನ. ಶ್ವೇತ ಬಿಳುವಿನ ವಸುಂಧರೆಯನ್ನು ರಕ್ತ ಸಿಕ್ತ ಮಾಡಿದ್ದ ಪಾಕಿಗಳ ನೆತ್ತರನ್ನೀಗ ಭಾರತ ಬಾನಲ್ಲಿ ರಂಗಿನ ಚಿತ್ತಾರವಾಗಿಸಿ ಜಗತ್ತಿಗೆ ನಾವು ಸುಮ್ಮನಿರೋ ಜಾಯಮಾನದವರಲ್ಲ ಅಂತಾ ಘೋಷಿಸಿಕೊಂಡಿದ್ದೇವೆ.
ಪಾಕ್ ವಿರುದ್ಧ ನಿರಂತರ ಮಿಸೈಲ್ ದಾಳಿ
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಸಿರಾಡುತ್ತಿದ್ದ ಜೈಶ್ ಮತ್ತ ಲಷ್ಕರ್ ನ ಉಗ್ರರನ್ನು ಗುರಿಯಾಗಿಸಿ ಭಾರತ ಅತ್ಯಂತ ನಿಖರ ದಾಳಿ ನಡೆಸಿದೆ. ಹಾಗಂತಾ ಈ ದಾಳಿಯಲ್ಲಿ ಪಾಕಿಸ್ಥಾನದ ಒಂದೇ ಒಂದು ಸೇನಾ ನೆಲೆಗೂ ಧಕ್ಕೆ ಮಾಡಲಾಗಿಲ್ಲ. ಭಾರತದ ಈ ಕುರುಕ್ಷೇತ್ರದಲ್ಲಿ ಹೆಚ್ಚಾಗಿ ಖಂಡಾಂತರ ಕ್ಷಿಪಣಿಗಳನ್ನು ಪ್ರಯೋಗಿಸಲಾಗಿದೆ. ಸ್ಕಲ್ಪ್ ಮಾದರಿಯ ಕ್ಷಿಪಣಿ ದಾಳಿಯನ್ನು ಆಪರೇಷನ್ ಸಿಂಧೂರದಲ್ಲಿ ಬಳಸಿಕೊಳ್ಳಲಾಗಿದೆ.
ನಿಗದಿತ ಗುರಿಯನ್ನು ಕರಾರುವಕ್ ತಲುಪೋ ತಾಕತ್ತಿನ ಈ ಸ್ಕಲ್ಪ್ ಗಳು 250 ಕಿಲೋಮೀಟರ್ ದೂರದ ಗುರಿಯನ್ನು ಕ್ಷಣಾರ್ಧದಲ್ಲಿ ಚಿಂದಿ ಚಿತ್ರಾನ್ನ ಮಾಡಿ ಮುಗಿಸಿವೆ. ಈ ಸ್ಕಲ್ಪ್ ದಾಳಿಗೆ ಮುರಿಡ್ಕೆಯಲ್ಲಿರುವ ಜೈಶ್ ಸಂಘಟನೆಯ ಕೇಂದ್ರ ಸ್ಥಾನ ಸುಭಾನ್ ಅಲಿ ಮಸೀದಿ ಪಾತಾಳ ಸೇರಿದೆ. 18 ಎಕರೆ ಪ್ರದೇಶದ ಈ ಉಗ್ರರ ತರಬೇತಿ ಕೇಂದ್ರವನ್ನ ಸ್ಕಲ್ಪ್ ಕ್ಷಿಪಣಿ ಸಮಾಧಿ ಮಾಡಿದೆ.
ಹ್ಯಾಮರ್ ದಾಳಿಗೆ ಗುಳ್ಳೆನರಿಗಳು ಖತಂ
ಸ್ಕಲ್ಪ್ ಜೊತೆ ಭಾರತ ನಿನ್ನೆ ಹ್ಯಾಮರ್ ಕ್ಷಿಪಣಿಗಳನ್ನೂ ಬಳಸಿದೆ. ಖಂಡಾಂತರ ಕ್ಷಿಪಣಿಗಳಲ್ಲೇ ಅತ್ಯಂತ ಶಕ್ತಿಶಾಲಿಯಾದ ಈ ಹ್ಯಾಮರ್ ಹೆಸರಿಗೆ ತಕ್ಕಂತೆ ಸುತ್ತಿಗೆಯಂತೆಯೇ ಆರ್ಭಟಿಸುತ್ತೆ. ಅದ್ರಲ್ಲೂ ಉಗ್ರರ ಅಡಗುದಾಣಗಳನ್ನು ಮತ್ತು ಬಂಕರ್ ಗಳನ್ನು ಉಡಾಯಿಸಲು ಈ ಹ್ಯಾಮರ್ ಕ್ಷಿಪಣಿ ತನ್ನದೇ ಪಾರಮ್ಯ ಮೆರೆದಿದೆ. ನಿನ್ನೆಯ ದಾಳಿಯಲ್ಲಿ ಭಾರತ 250ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಪ್ರಯೋಗಿಸಿದೆ ಎನ್ನಲಾಗುತ್ತಿದೆ.