ನವದೆಹಲಿ: ಭಾರತದ ಹಲವು ತಾಯಂದಿರ ಸಿಂಧೂರ ಅಳಿಸಿದ್ದ ಉಗ್ರರನ್ನು ಭಾರತೀಯ ಹೆಮ್ಮೆಯ ಯೋಧರು ಮಟ್ಯಾಶ್ ಮಾಡಿದ್ದಾರೆ. ಈಗ ಇದಕ್ಕೆ ಕೆಂಡಾಮಂಡಲವಾಗಿರುವ ಪಾಕಿಸ್ತಾನ ಗಡಿಯಲ್ಲಿ ಕುಳಿತು ಗಾಳಿಯಲ್ಲಿ ಗುಂಡು ಹಾರಿಸುತ್ತಿದೆ.
ಜಮ್ಮು ಕಾಶ್ಮೀರದ ಪೂಂಚ್ ನಲ್ಲಿ ನಡೆದ ದಾಳಿಯಲ್ಲಿ 10 ಜನ ಭಾರತೀಯ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ನಲ್ಲಿ ಉಗ್ರರು, ಹಿಂದೂಗಳಿಗೆ ಗುಂಡು ಹಾರಿಸಿ ಹಿಂದೂ ಮಹಿಳೆಯರ ಸಿಂಧೂರ ಕಸಿದುಕೊಂಡಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ಅಡಿಯಲ್ಲಿ ಪಾಕಿಸ್ತಾನದ 9 ಉಗ್ರರ ನೆಲೆಗಳನ್ನು ಧ್ವಂಸ ಮಾಡಿದೆ.
ಹೀಗಾಗಿ ಗಡಿಯಲ್ಲಿ ಪಾಕ್ ಗುಂಡು ಹಾರಿಸುತ್ತಿದ್ದು, 10 ಜನ ನಾಗರಿಕರು ಬಲಿಯಾಗಿದ್ದಾರೆ. ಅಲ್ಲದೇ, 38 ಜನ ಗಾಯಗೊಂಡಿದ್ದಾರೆ. ಪಾಪಿ ಪಾಕ್ ಮತ್ತೆ ತನ್ನ ಕುತುಂತ್ರ ಬುದ್ಧಿ ಪ್ರದರ್ಶಿಸಿದೆ. ಅಮಾಯಕರನ್ನು ಬಲಿ ಪಡೆಯುವ ತನ್ನ ಹಳೆಯ ಚಾಳಿ ಮುಂದುವರೆಸಿದೆ. ಎಲ್ಒಸಿ ಬಳಿಯ ಹಳ್ಳಿಗಳ ಮೇಲೆ ಫಿರಂಗಿ ಮತ್ತು ಮೋರ್ಟರ್ ಗಳಿಂದ ಶೆಲ್ ದಾಳಿ ನಡೆಸಿ ಅಮಾಯಕರನ್ನು ಬಲಿ ಪಡೆದಿದೆ.
ಇದಕ್ಕೆ ಭಾರತೀಯ ಸೇನೆಯೂ ತಕ್ಕ ಉತ್ತರ ನೀಡಿದೆ. ಭಾರತದ ಪ್ರತೀಕಾರದ ಕ್ರಮದಲ್ಲಿ ಪಾಕಿಸ್ತಾನ ಸೇನೆಯೂ ನಷ್ಟ ಅನುಭವಿಸಿದೆ.