ಇಸ್ಲಾಮಾಬಾದ್: ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಭಾರತ ಕೆಂಡಾಮಂಡಲವಾಗಿದೆ. ಯಾವ ಕ್ಷಣದಲ್ಲಾದರೂ ಪಾಕ್ ಮೇಲೆ ಮುಗಿ ಬೀಳಬಹುದು ಎನ್ನಲಾಗುತ್ತಿದೆ. ಈ ಮಧ್ಯೆ ಪಾಕಿಸ್ತಾನ್, ಭಾರತದ ಗುಡುಗಿಗೆ ಹಾಗೂ ನಿರ್ಧಾರಕ್ಕೆ ಪತರಗುಟ್ಟುತ್ತಿದೆ. ಈಗ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಕುಟುಂಬ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗುತ್ತಿದೆ.
ವರದಿಯಂತೆ, ಅಸಿಮ್ ಮುನೀರ್ ತನ್ನ ಕುಟುಂಬವನ್ನು ಪ್ರೈವೇಟ್ ಏರ್ಕ್ರಾಫ್ಟ್ ಮೂಲಕ ಬ್ರಿಟನ್ ಅಥವಾ ನ್ಯೂ ಜರ್ಸಿಗೆ ಕಳುಹಿರುವ ಕುರಿತು ವರದಿಯಾಗಿದೆ. ಪಹಲ್ಗಾಮ್ ದಾಳಿಯ ನಂತರ ಭಾರತ ಯುದ್ಧನೌಕೆ ಐಎನ್ಎಸ್ ಸೂರತ್ನಿಂದ ಕ್ಷಿಪಣಿ ಪರೀಕ್ಷೆ ನಡೆಸುವ ಮೂಲಕ ಅರೇಬಿಯನ್ ಸಮುದ್ರದಲ್ಲಿರುವ ಶತ್ರುಗಳಿಗೆ ಸಂದೇಶ ನೀಡಿತ್ತು. ಭಾರತವು ಪಾಕ್ ವಿರುದ್ಧ ಹಲವಾರು ಕಠಿಣ ನಿಯಮ ಜಾರಿಗೆ ತಂದಿದೆ. ಈ ಬೆನ್ನಲ್ಲೇ ಪಾಕ್ ನಡುಗುತ್ತಿದೆ.