ತುಮಕೂರು: ತುಮಕೂರು-ಯಶವಂತಪುರ ಮೆಮು ರೈಲಿನಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದನ್ನು ತಡವಾಗಿ ಘೋಷಣೆ ಮಾಡಿದ್ದಾರೆಂದು ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ.
ತುಮಕೂರು ರೈಲ್ವೇ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರೈಲು 8.45ಕ್ಕೆ ತುಮಕೂರಿನಿಂದ ಹೊರಡಬೇಕಿತ್ತು. ಅದಕ್ಕೂ ಮುನ್ನ ಯಾವುದೇ ಘೋಷಣೆ ಮಾಡದ ರೈಲ್ವೇ ಅಧಿಕಾರಿಗಳು 9.25 ಕ್ಕೆ ರೈಲು ರದ್ದಾಗಿರುವ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು ರೈಲ್ವೇ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.