ಧಾರವಾಡ : ‘ನಮ್ಮ ನಗರ-ಸ್ವಚ್ಛ ನಗರ’ ಅಭಿಯಾನದ ಹಿನ್ನೆಲೆಯಲ್ಲಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಧಾರವಾಡ ನಗರದ ಮಾಳಮಡ್ಡಿಯಲ್ಲಿ ಅಭಿಯಾನಕ್ಕೆ ಸಂತೋಷ್ ಲಾಡ್ ಚಾಲನೆ ನೀಡಿದರು. ಕಸ ಕ್ಲಿನ್ ಮಾಡುವ ಮೂಲಕ ಅಭಿಯಾನಕ್ಕೆ ಲಾಡ್ ಚಾಲನೆ ನೀಡಿದರು. ಅಲ್ಲದೇ, ನಗರದ ವಿವಿಧ ಬಡಾವಣೆಗಳಲ್ಲಿ ಅಭಿಯಾನ ನಡೆಯಿತು. ಜಿಲ್ಲಾಧಿಕಾರಿ ದಿವ್ಯಪ್ರಭು, ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ವಿದ್ಯಾರ್ಥಿಗಳು, ಸರ್ಕಾರಿ ನೌಕರಸ್ಥರು, ಪಾಲಿಕೆ ಸಿಬ್ಬಂದಿ ಅಭಿಯಾನಕ್ಕೆ ಸಾಥ್ ನೀಡಿದರು. ನಗರದ ರೈಲ್ವೆ ನಿಲ್ದಾಣ ರಸ್ತೆ, ಶಿವಾಜಿ ಸರ್ಕಲ್, ಹೆಬ್ಬಳ್ಳಿ ಅಗಸಿ ಬಳಿ ಅಭಿಯಾನ ನಡೆಯಿತು.