ಬೆಂಗಳೂರು: ರೈತರಿಗೆ ನೀಡುವ ಯಾವುದೇ ರೀತಿಯ ಪರಿಹಾರಕ್ಕೆ ಸೇವಾ ತೆರಿಗೆ ಸೇರಿದಂತೆ ಜಿಎಸ್ ಟಿ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನ ನಿವಾಸಿಗಳಾದ ಆರ್. ಆಶಾ ಸೇರಿದಂತೆ ಹಲವರು ವಾಣಿಜ್ಯ ತೆರಿಗೆ ಇಲಾಖೆ ನೀಡಿದ್ದ ಶೋಕಾಸ್ ನೋಟಿಸ್ಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಆಲಿಸಿದ ನ್ಯಾ.ಎಸ್.ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಈ ಕುರಿತ ಮಹತ್ವದ ತೀರ್ಪು ಪ್ರಕಟಿಸಿದೆ. ರೈತರು ಇಷ್ಟವಿಲ್ಲದಿದ್ದರೂ ಭೂಮಿ ಕಳೆದುಕೊಂಡಿರುತ್ತಾರೆ.
ಅದರೊಂದಿಗೆ ಅವರಿಗೆ ಭಾವನಾತ್ಮಕ ಸಂಬಂಧವಿರುತ್ತದೆ. ಇದಕ್ಕೆ ಪರ್ಯಾಯವಾಗಿ ಅವರು ಹಣ ಪಡೆದಿರುತ್ತಾರೆ. ಹೀಗಾಗಿ ಈ ಮೊತ್ತಕ್ಕೆ ಜಿಎಸ್ ಟಿ ವಿಧಿಸುವಂತಿಲ್ಲ ಹೈಕೋರ್ಟ್ ಆದೇಶ ನೀಡಿದೆ.