ಬೆಂಗಳೂರು: ಬಿಬಿಎಂಪಿಗೆ ನೂತನ ಆಯುಕ್ತರ ನೇಮಕವಾಗಿದ್ದು, ಮಹೇಶ್ವರ ರಾವ್ ಸಾರಥ್ಯ ವಹಿಸಲಿದ್ದಾರೆ.
ಈ ಕುರಿತು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಇಲ್ಲಿಯವರೆಗೆ ಆಯುಕ್ತರಾಗಿದ್ದ ತುಷಾರ್ ಗಿರಿನಾಥ್ ಅವರನ್ನು ವರ್ಗವಣೆ ಮಾಡಲಾಗಿದೆ.
ಮಹೇಶ್ವರ್ ರಾವ್ ಅವರು ಬಿಎಂಆರ್ ಸಿಎಲ್ ಎಂಡಿ ಆಗಿದ್ದರು. ಈಗ ಬಿಬಿಎಂಪಿ ಮುಖ್ಯ ಅಯುಕ್ತರ ಹುದ್ದೆಗೆ ನೇಮಕ ಮಾಡಲಾಗಿದೆ. ಬಿಎಂಆರ್ ಸಿಎಲ್ ಎಂಡಿ ಹುದ್ದೆ ಜೊತೆಗೆ ಬಿಬಿಎಂಪಿ ಆಯುಕ್ತರ ಹುದ್ದೆ ನಿಭಾಯಿಸಲಿದ್ದಾರೆ.
ತುಷಾರ ಗಿರಿನಾಥ್ ಅವರನ್ನು ನಗರಾಭಿವೃದ್ಧಿ ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಅಲ್ಲದೇ, ಹೆಚ್ಚುವರಿಯಾಗಿ ಬಿಬಿಎಂಪಿ ಆಡಳಿತಾಧಿಕಾರಿಯಾಗಿ ನೇಮಕ ಮಾಡಲಾಗಿದೆ.