ಕೊಪ್ಪಳ: ಕೊಪ್ಪಳ ತಾಲೂಕಿನ ಮಂಗಳಾಪುರದ ಕಬರಸ್ತಾನದಲ್ಲಿ ಹನುಮದೇವರ ಪುಷ್ಕರಣಿ ಮುಚ್ಚಿಸಿರುವ ಆರೋಪ ಕೇಳಿ ಬಂದಿದೆ.
ಮುಸ್ಲಿಂ ಸಮುದಾಯದವರು ಮುಚ್ಚಿಸಿದ್ದಾರೆಂದು ಹಿಂದೂಗಳು ಆರೋಪಿಸಿದ್ದಾರೆ. ಪುಷ್ಕರಣಿ ಕುರಿತು 2007 ರಿಂದ ನ್ಯಾಯಲಯದಲ್ಲಿ ಪ್ರಕರಣ ನಡೆಯುತ್ತಿದೆ. 2022 ರಲ್ಲಿ ಹನುಮದೇವರ ಪುಷ್ಕರಣಿ ಪತ್ತೆಯಾಗಿತ್ತು. ನ್ಯಾಯಲಯದಿಂದ ಪೂರ್ಣ ತೀರ್ಪು ಬರುವ ಮುನ್ನ ಪುಷ್ಕರಣಿ ಮುಚ್ಚಿಸಲಾಗಿದೆ ಎಂದು ಹಿಂದೂಗಳು ಆರೋಪಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ತಹಸೀಲ್ದಾರ್ ಭೇಟಿ ನೀಡಿದ್ದು, ಸಧ್ಯಕ್ಕೆ ಕಬರಸ್ತಾನ ಸ್ವಚ್ಛತೆ ನಿಲ್ಲಿಸಲು ಸೂಚನೆ ನೀಡಿದ್ದಾರೆ. ನ್ಯಾಯಲಯದ ಅಂತಿಮ ತೀರ್ಪು ಬರುವವರಿಗೂ ಇಲ್ಲಿ ಎರಡೂ ಸಮುದಾಯದವರು ಮುಂದುವರಿಯದಂತೆ ತೀರ್ಮಾನ ಮಾಡಲಾಗಿದೆ. ಸೂಕ್ತ ದಾಖಲೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.