ಬೆಳಗಾವಿ: ಬೆಳಗಾವಿಯಲ್ಲಿ ಮತ್ತೆ ಕೋಮು ಗಲಭೆಯ ಆತಂಕ ವ್ಯಕ್ತವಾಗಿದೆ. ಮುಸ್ಲಿಂ ಯುವಕನೋರ್ವ ಹಿಂದೂ ದೇವಸ್ಥಾನದ ಮೇಲೆ ಕಲ್ಲು ಎಸೆದಿರುವ ಘಟನೆ ನಡೆದಿದೆ.
ಬೆಳಗಾವಿ ನಗರದ ಪಾಂಗುಳ್ ಗಲ್ಲಿಯಲ್ಲಿರುವ ಮಂದಿರಕ್ಕೆ ಕಲ್ಲು ಎಸೆದಿದ್ದಾನೆ. ಉಜ್ವಲ ನಗರದ ನಿವಾಸಿ ಯಾಸೀರ್ ನರಸದಿ(19) ಎಂಬಾತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಯಾಸೀರ್ ವಿರುದ್ಧ ದೂರು ದಾಖಲಾಗಿದೆ. ಕಲ್ಲು ಎಸೆದಿರುವುದನ್ನು ಗಮನಿಸಿದ ಸ್ಥಳೀಯರು ಯಾಸೀರ್ ಗೆ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಯಾಸೀರ್ ಎರಡನೇ ಬಾರಿಗೆ ಕಲ್ಲು ಎಸೆದಿದ್ದಾನೆ. ಇದೇ ತಿಂಗಳಲ್ಲಿ ಈತ ಕಲ್ಲು ಎಸೆದಿದ್ದ. ಈಗ ಎರಡನೇ ಬಾರಿಗೆ ಕಲ್ಲು ಎಸೆದಿದ್ದಾನೆ. ಕಲ್ಲು ಎಸೆದ ಯುವಕ ಯಾಸೀರ್ ಮಾನಸಿಕ ಅಸ್ವಸ್ಥತನಾಗಿದ್ದಾನೆ ಎನ್ನಲಾಗಿದೆ. ಈ ಕುರಿತು ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.