ಚಿಕ್ಕಬಳ್ಳಾಪುರ: ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸೆ, ಲಂಡನ್ ಗೆ ಕಳುಹಿಸುವುದಾಗಿ ಹೇಳಿ ಆರೋಪಿಗಳು ಕೊಲೆ ಮಾಡಿದ್ದಾರೆ. ಜೂನ್ 23ರಂದು ಕೆಂಪದೇನಹಳ್ಳಿಯಲ್ಲಿ ಕೊಲೆ ನಡೆದಿತ್ತು. ಕೈಕಾಲು ಕಟ್ಟಿ, ಮೃತ ದೇಹಕ್ಕೆ ಕಲ್ಲು ಕಟ್ಟಿ ಆರೋಪಿಗಳು ಮೃತದೇಹವನ್ನು ಬಾವಿಗೆ ತಳ್ಳಿದ್ದಾರೆ ಎಂದಿದ್ದಾರೆ.
ಸಾವನ್ನಪ್ಪಿರುವ ಯುವಕ ಅಗ್ರಿಕಲ್ಚರಲ್ ಪ್ರೊಫೆಸರ್ ಆಗಿದ್ದಾರೆ. ರಾಮಾಂಜಿ ಸಾವನ್ನಪ್ಪಿರುವ ಯುವಕ. ಹಂತಕರು ಲಂಡನ್ ಗೆ ಕಳುಹಿಸುವುದಾಗಿ ವಂಚಿಸಿದ್ದಾರೆ. ಸುಧಾಕರ್ ಕೊಲೆಮಾಡಿರುವ ಎ1. ಅಧಿಕ ಸಂಬಳದ ಆಮಿಷವೊಡ್ಡಿ ಕೊಲೆ ಮಾಡಿದ್ದಾರೆ. ಆನಂತರ ಟಿಕೆಟ್ ಬುಕ್ ಆಗಿದೆ ಎಂದು ಕರೆಯಿಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಕೊಲೆ ಮಾಡಿದ ಆರೋಪಿಗಳು ಕೆಂಪದೇನಹಳ್ಳಿ ಬಳಿಯ ಬಾವಿಯಲ್ಲಿ ಬೀಸಾಡಿ, ರಾಮಾಂಜಿ ವಸ್ತು, ಬಟ್ಟೆಗಳನ್ನು ಸುಟ್ಟು ಹಾಕಿ ಪರಾರಿಯಾಗಿದ್ದಾರೆ.
ಆರೋಪಿಗೆ ಮಂಜುನಾಥ್, ಮನೋಜ್ ಸಹಾಯ ಮಾಡಿದ್ದಾರೆ. ಆರೋಪಿ ಸುಧಾಕರ್ ವಿರುದ್ಧ ಈ ಹಿಂದೆ ಕೂಡ ಕೆಲವು ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.