ಸಿಂಧೂರ ಕಸಿದವರನ್ನು ಬಿಡುವ ಪ್ರಶ್ನೆಯೇ ಇಲ್ಲಾ. ನಾವು ಈಗಾಗಲೇ ಅವರ ಮನೆಗೆ ನುಗ್ಗಿ ಹೊಡೆದಿದ್ದೇವೆ. ತುಂಬಾ ಸಾವಧಾನದಿಂದ ಯೋಚಿಸಿ ಉಗ್ರರ ವಿರುದ್ಧ ಮಾತ್ರ ಕಾರ್ಯಾಚರಣೆ ನಡೆಸಲಾಗಿದೆ.
ಆಪರೇಷನ್ ಸಿಂಧೂರ ಅತ್ಯಂತ ಯಶಸ್ವೀ ಕಾರ್ಯಾಚರಣೆಯಾಗಿದ್ದು ಮುಂದಿನ ಪೀಳಿಗೆಗೆ ಸೂರ್ತಿಯಾಗಿರಲಿದೆ ಅಂತಾ ಪ್ರಧಾನಿ ಘೋಷಿಸಿದ್ದಾರೆ. ಪಂಜಾಬ್ ನ ಅಂದಪುರದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವು ಕೇವಲ ಉಗ್ರರನ್ನು ಕೊಂದಿದ್ದೇವೆ. ಆದ್ರೆ ಪಾಕಿಸ್ತಾನ ನಾಗರೀಕರನ್ನೇ ಹತ್ಯೆ ಮಾಡಿದೆ. ಇಂಥಾ ಪರಮ ಪಾಪಿಗಳನ್ನು ಕ್ಷಮಿಸುವ ಪ್ರಮೇಯವೇ ಇಲ್ಲ.
ಭಾರತದ ಐತಿಹಾಸಿಕ ಕಾರ್ಯಾಚರಣೆ ಹಲವು ದಿನಗಳವರೆಗೆ ಉಗ್ರರಿಗೆ ನಿದ್ರೆ ಬರಿಸುವುದಿಲ್ಲ. ನಾವು ಕೇವಲ ಪಾಕಿಸ್ತಾನದ ವಾಯುನೆಲೆಗಳನ್ನು ಧ್ವಂಸಗೊಳಿಸಿಲ್ಲ ಬದಲಿಗೆ ಅವರ ಜಂಗಾಬಲವನ್ನೇ ಪುಡಿ ಮಾಡಿದ್ದೇವೆ. ನಾನಿಂದು ವೀರ ಭೂಮಿಯಲ್ಲಿ ನಿಂತು ಹೇಳುತ್ತಿದ್ದೇನೆ, ನಿಮ್ಮ ಅಣ್ವಸ್ತ್ರದ ಬೆದರಿಕೆಗೆಲ್ಲಾ ನಾವು ಬೆದರೋದಿಲ್ಲ. ಸುಮ್ಮನಿದ್ದವರನ್ನು ಕೆಣಕಿದ್ರೆ ಪ್ರತೀಕಾರ ಶತಸಿದ್ಧ ಅಂತಾ ಮೋದಿ ಘೋಷಿಸಿದ್ದಾರೆ.