ಬೆಳಗಾವಿ: ಅಂಬೋಲಿ ಕವಳೆಸಾತ್ ಫಾಲ್ಸ್ ನಲ್ಲಿ ಬಿದ್ದು ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆಯಾಗಿದೆ.
ಮಹಾರಾಷ್ಟ್ರ ಜಿಲ್ಲೆಯ ಸಿಂಧದುರ್ಗ ತಾಲೂಕಿನ ಕವಳೆಸಾತ್ ಫಾಲ್ಸ್ ನಲ್ಲಿ ಈ ಘಟನೆ ನಡೆದಿತ್ತು. ಕೊಲ್ಲಾಪುರ ಪಟ್ಟಣದ ಚಿಲಿ ಕಾಲೋನಿ ನಿವಾಸಿ ರಾಜೇಂದ್ರ ಸಂಗರ್ (45) ಸಾವನ್ನಪ್ಪಿದ್ದ. ಕರವಸ್ತ್ರವನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾಗ ಆಳವಾದ ಕಂದಕಕ್ಕೆ ಬಿದ್ದು ರಾಜೇಂದ್ರ ನಾಪತ್ತೆಯಾಗಿದ್ದ. ಸತತ 20ಗಂಟೆಗಳ ಕಾರ್ಯಾಚರಣೆ ಮೂಲಕ ಶವವಾಗಿ ಪ್ರವಾಸಿಗ ಪತ್ತೆಯಾಗಿದ್ದಾನೆ. ಎನ್ಡಿಆರ್ಎಫ್, ಸ್ಥಳೀಯ ನಾಗರಿಕರ ಸಹಾಯದಿಂದ ಮೃತದೇಹ ಹೊರ ತೆಗೆಯಲಾಗಿದೆ.