ಕಾಂಗ್ರೆಸ್ ಸರ್ಕಾರ ಆರ್ ಸಿಬಿ ಗೆಲುವಿನ ಪ್ರಯೋಜನ ಪಡೆಯೋದಕ್ಕಾಗಿ ಕಾರ್ಯಕ್ರಮ ಮಾಡಿ ಮುಖಭಂಗ ಆಯಿತು. ಪಾಪದ ಕೆಲಸ ಮಾಡಿ 11 ಜನರ ಸಾವಿಗೆ ಕಾರಣವಾಗಿರುವ ಸಿಎಂ, ಡಿಸಿಎಂ ತಲೆದಂಡವಾಗಬಹುದು ಅಂತಾ ನಾವು ಅಂದುಕೊಂಡಿದ್ದೇವು. ಕರೆದು ತಲೆದಂಡ ಮಾಡುವುದನ್ನು ಬಿಟ್ಟು, ಜಾತಿ ಗಣತಿ ಅಡ್ಡ ಇಟ್ಟು ದಾರಿ ತಪ್ಪಿಸುವ ಕೆಲಸ ಆಗುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 11 ಸಾವಿನ ಕುಟುಂಬಗಳಿಗೆ ಹಾಗೂ ಜನತೆಗೆ ಮತ್ತೊಂದು ದ್ರೋಹ ಮಾಡುತ್ತಿದೆ. ಜಾತಿಗಣತಿ ಕೇಂದ್ರ ಮಾಡತ್ತೆ ಅಂದ ಮೇಲೆ ಮತ್ತೆ ಹೀಗ್ಯಾಕೆ ಮಾಡಬೇಕು ಎಂದಿದ್ದಾರೆ.
ವಾಲ್ಮೀಕಿ ಆಯೋಗದಲ್ಲಿ 187 ಕೋಟಿ ರೂ. ಮಿಸ್ ಯೂಸ್ ಆಗಿದೆ. ಕೇವಲ 87 ಕೋಟಿ ರೂ. ಅಂತ ಸಿಎಂ ಕ್ಯಾಬಿನೆಟ್ ನಲ್ಲಿ ಹೇಳುವ ಮೂಲಕ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಯಾರ್ಯಾರು ಚುನಾವಣೆ ಸಂದರ್ಭದಲ್ಲಿ ಎಷ್ಟೆಷ್ಟು ಖರ್ಚು ಮಾಡಿದ್ದರು ಎಂಬುವುದು ಈ ರೇಡ್ ನಿಂದ ತಿಳಿಯಲಿದೆ ಎಂದಿದ್ದಾರೆ.