ಕೊಡವೂರು ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡುವಂತಾಗಲಿ ಎಂದು ಸಮಾಜ ಸುಧಾರಕ, ಉಡುಪಿ ನಗರಸಭಾ ಸದಸ್ಯ ವಿಜಯ್ ಕೊಡವೂರು ಹೇಳಿದ್ದಾರೆ.
ಕೊಡವೂರು ವಿಪ್ರಶ್ರೀ ಸಭಾಭವನದಲ್ಲಿ ನಡೆದ ಪೌಷ್ಟಿಕ ಆಹಾರ ಕಿಟ್ ಮತ್ತು ಗಾಲಿಕುರ್ಚಿ ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವೂರಿನಲ್ಲಿ ಸರ್ವೇ ಮಾಡಿ ದಿವ್ಯಾಂಗರನ್ನು ಪಟ್ಟಿ ಮಾಡಲಾಗಿದೆ. ಅವರ ಕಷ್ಟ-ಸುಖಗಳಿಗೆ ಸ್ಪಂದಿಸುವ ಕಾರ್ಯ ಮಾಡಲಾಗುತ್ತಿದೆ. ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುವ ಕಾರ್ಯ ಮಾಡಲಾಗುತ್ತಿದೆ. ದಿವ್ಯಾಂಗ ರಕ್ಷಣಾ ಸಮಿತಿ ತಂಡ ರಚಿಸಿಕೊಂಡು ದಿವ್ಯಾಂಗರಿಗೆ ಬೇಕಾದ ಅಗತ್ಯತತೆ ಮತ್ತು ಸಲಕರಣೆಗಳನ್ನು ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಎಂಸಿಕೆ ಎಸ್ ಎಫ್ ಎಚ್ ಕೆಎ ವತಿಯಿಂದ ದುಡಿಯಲು ಸಾಧ್ಯವಿಲ್ಲದ ದಿವ್ಯಾಂಗರು ಮತ್ತು ಅಶಕ್ತರು, ಕ್ಯಾನ್ಸರ್ ಪೀಡಿತರು ಸೇರಿದಂತೆ ಹಲವಾರು ರೋಗಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಪೌಷ್ಠಿಕ ಆಹಾರ ಕಿಟ್ ಗಳನ್ನು ವಿತರಿಸುತ್ತಿದೆ. ಕೊಡವೂರು ರಾಜ್ಯದಲ್ಲಿಯೇ ಮಾದರಿಯಾಗಬೇಕು. ಎಲ್ಲ ಸಮಸ್ಯೆಗಳಿಗೂ ಅದು ಉತ್ತರ ನೀಡಬೇಕು ಎಂದು ಹೇಳಿದ್ದಾರೆ.
ಈ ವೇಳೆ ಎಂಸಿಕೆ ಎಸ್ ಎಫ್ ಎಫ್ ಎಚ್ ಕೆಎ ಪ್ರಮುಖರಾದ ನಿಧಿ ಎಸ್, ಜ್ಯೋತಿ, ಉಡುಪಿ ನಗರಸಭಾ ಸದಸ್ಯರಾದ ಕೆ.ವಿಜಯ ಕೊಡವೂರು, ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್ ಕೊಪ್ಪಲ್ ತೋಟ, ಕಾರ್ಯದರ್ಶಿ ಜಯ ಕಲ್ಮಾಡಿ, ಸರ್ವೋತ್ತಮ ಹೆರ್ಗ, ಸಮಾಜ ಸೇವಕ ಅಖಿಲೇಶ್ ಎ ಉಜಿರೆ ಸೇರಿದಂತೆ ಹಲವರು ಇದ್ದರು.