ಬೆಂಗಳೂರು: ಕಸದ ಹೆಸರಿನಲ್ಲಿ ಬಿಬಿಎಂಪಿಗೆ ಬೃಹತ್ ಕಟ್ಟಡಗಳು, ಕೈಗಾರಿಕೆಗಳು, ಹೋಟೆಲ್ ಗಳು, ಅಪಾರ್ಟ್ಮೆಂಟ್ ಗಳು ಹಾಗೂ ಪಬ್ ಗಳು ಭಾರೀ ವಂಚನೆ ಮಾಡುತ್ತಿವೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಎರಡು ತಿಂಗಳಿಂದ ರಾಜ್ಯ ಸರ್ಕಾರ ಕಸ ವಿಲೇವಾರಿಗೆಂದು ಶುಲ್ಕು ವಿಧಿಸಿತ್ತು. ಬೃಹತ್ ಕಟ್ಟಡಗಳಲ್ಲಿ, ಪಬ್, ಅಪಾರ್ಟ್ಮೆಂಟ್, ಹೋಟೆಲ್, ಕೈಗಾರಿಕೆಗಳಲ್ಲಿ ಉತ್ಪಾದನೆ ಹಾಗುವ ಕಸ ವಿಲೇವಾರಿಗೆ ಶುಲ್ಕ ಪಾವತಿ ಮಾಡಬೇಕು ಅಂತ ಅದೇಶ ನೀಡಿತ್ತು. ಇನ್ನೊಂದೆಡೆ ಮನೆ, ಮನೆಗಳಿಂದ ಉತ್ಪಾದನೆ ಅಗುವ ಕಸಕ್ಕೂ ಶುಲ್ಕ ಪಾವತಿಸುವಂತೆ ಅದೇಶ ನೀಡಲಾಗಿತ್ತು.
ಮನೆ -ಮನೆ ಕಸ ವಿಲೇವಾರಿಗೆ ಆಸ್ತಿ ತೆರಿಗೆ ವೇಳೆ ಹಣ ವಸೂಲಿ ಮಾಡಲಾಗುತ್ತೆದ. ಆದರೆ, ಬೃಹತ್ ಕಟ್ಟಡಗಳು ಸೇರಿದಂತೆ ವಾಣಿಜ್ಯ ಉದ್ಯಮಿಗಳು ತಮ್ಮ ಕಸ ತಾವೇ ವಿಲೇವಾರಿ ಮಾಡುತ್ತೇವೆಂದು ಘೋಷಣೆ ಮಾಡಿದ್ದವು. ಆದರೆ, ಈಗ ಕಸ ವಿಲೇವಾರಿ ಮಾಡದೆ ಶುಲ್ಕ ಪಾವತಿಸದೆ ವಂಚನೆ ಮಾಡುತ್ತಿವೆ. ಪ್ರತಿ ನಿತ್ಯ ಹೋಟೆಲ್, ಅಪಾರ್ಟ್ಮೆಂಟ್, ಪಬ್ ಗಳಿಗೆ ಕಸದ ಟಿಪ್ಪರ್ ಹೋಗಿ ಕಸ ವಿಲೇವಾರಿ ಮಾಡುತ್ತಿವೆ. ಇದರಿಂದ ಪಾಲಿಕೆಯಿಂದ ಶುಲ್ಕ ವಿನಾಯಿತಿ ಪಡೆದು ಬಿಬಿಎಂಪಿಗೆ ವಂಚನೆ ಮಾಡುತ್ತಿರುವ ಆರೋಪ ಕೇಳಿ ಬಂದಿದೆ. ಈಗ ಇಂತಹ ಮೋಸಕ್ಕೆ ಕಡಿವಾಣ ಹಾಕಲು ಬಿಬಿಎಂಪಿ ಮುಂದಾಗಿದೆ.