ಶಿವಮೊಗ್ಗ: ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಅವರ ನಾರಾಯಣ ಬಲಿ ಕಾರ್ಯವನ್ನು ನಡೆಸಲಾಯಿತು.
ನಗರದ ತುಂಗಾ ತೀರದ ರೋಟರಿ ಚಿತಾಗಾರದಲ್ಲಿ ಮಂಜುನಾಥ್ ಪುತ್ರ ಅಭಿ ಜೈ ನೆರವೇರಿಸಿದರು. ಮಂಜುನಾಥ್ ಅವರಿಗೆ ಮೋಕ್ಷ ದೊರೆಯಲಿ ಎಂದು ನಾರಾಯಣ ಬಲಿ ಕಾರ್ಯ ನೆರವೇರಿಸಲಾಗಿದ್ದು, ಕಾರ್ಯಕ್ಕೆ ಕುಟುಂಬಸ್ಥರಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಮಂಜುನಾಥ್ ಅವರನ್ನು ಕಳೆದುಕೊಂಡು ದುಖಃದಲ್ಲೇ ಕುಟುಂಬಸ್ಥರು ಕಾರ್ಯವನ್ನು ನೆರವೇರಿಸಿದರು. 13ನೇ ದಿನದಂದು ನಡೆಯಲಿರುವ ವೈಕುಂಟ ಸಮಾರಾಧನೆ ನಡೆಸಲಿದ್ದಾರೆ.